ಬೆಂಗಳೂರು: ದಯಾನಂದ ಸಾಗರ ಕಾಲೇಜಿನ ‘ವೈಬ್ರೇಷನ್ಸ್’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ನಟ ಮಾಸ್ಟರ್ ಆನಂದ್, ಚೈತ್ರ ವಾಸುದೇವನ್ ಹಾಗೂ ವಿಕ್ಕಿ ವರುಣ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ಪ್ರದರ್ಶನ ಕಲೆಗಳ ಕೇಂದ್ರದ ‘ಮುದ್ರಾ’ ನೃತ್ಯ ತಂಡದಿಂದ ಆಕರ್ಷಕವಾದ ನೃತ್ಯ ಪ್ರದರ್ಶನ ಗಮನಸೆಳೆಯಿತು.
‘ಬಾಹ್ಯಾಕಾಶ’ ಎನ್ನುವ ವಿಷಯದೊಂದಿಗೆ ಈ ವರ್ಷದ ವೈಬ್ರೇಷನ್ಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ರಂಜಿಸಿದವು. ತಾಳಕ್ಕೆ ತಕ್ಕಂತೆ ಕುಣಿದ ಗಗನಯಾತ್ರಿಯ ಕಾರ್ಯಕ್ರಮ ಉತ್ಸವಕ್ಕೆ ಮೆರುಗು ನೀಡಿತು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಉತ್ಸವಕ್ಕೆ ಕಳೆ ತಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.