ADVERTISEMENT

ಕೃಷಿ ಉಪಕರಣಗಳ ಕಳವು ಆರೋಪಿಗಳ ಬಂಧನ: ₹17.15 ಲಕ್ಷ ಮೌಲ್ಯದ ವಸ್ತುಗಳ ಜಪ್ತಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 5:23 IST
Last Updated 25 ಡಿಸೆಂಬರ್ 2025, 5:23 IST
ಹುಲಸೂರ ಸಮೀಪದ ಮೇಹಕರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟ್ರಾಲಿ ಕಳ್ಳತನ ಪ್ರಕರಣ ಭೇದಿಸಿ ಬಂದಿತರಿಂದ ವಶಕ್ಕೆ ಪಡೆದಿರುವ ಕೃಷಿ ಉಪಕರಣಗಳೊಂದಿಗೆ ಪೊಲೀಸ್‌ ಅಧಿಕಾರಿಗಳು
ಹುಲಸೂರ ಸಮೀಪದ ಮೇಹಕರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟ್ರಾಲಿ ಕಳ್ಳತನ ಪ್ರಕರಣ ಭೇದಿಸಿ ಬಂದಿತರಿಂದ ವಶಕ್ಕೆ ಪಡೆದಿರುವ ಕೃಷಿ ಉಪಕರಣಗಳೊಂದಿಗೆ ಪೊಲೀಸ್‌ ಅಧಿಕಾರಿಗಳು   

ಹುಲಸೂರ: ಸಮೀಪದ ಮೇಹಕರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಟ್ರಾಲಿ ಹಾಗೂ ಕೃಷಿ ಉಪಕರಣಗಳ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿತರನ್ನು ಬಂಧಿಸಿ ₹17.15 ಲಕ್ಷ ಮೌಲ್ಯದ ವಸ್ತುಗನ್ನು ಜಪ್ತಿ ಮಾಡಿದ್ದಾರೆ.

ಭಾಲ್ಕಿ ಗ್ರಾಮೀಣ ಸಿಪಿಐ ಹನುಮರೆಡ್ಡಿ ನೇತೃತ್ವದಲ್ಲಿ ಮೇಹಕರ ಪೊಲೀಸ್ ಠಾಣೆಯ ಪಿಎಸ್‌ಐ ಸುದರ್ಶನರೆಡ್ಡಿ ಹಾಗೂ  ತಂಡ ಈ ಕಾರ್ಯಾಚರಣೆ ನಡೆಸಿ ಡೊಣಗಾಂವ (ಎಂ) ಗ್ರಾಮದ ವಿಶ್ವನಾಥ ರೂಪನಾರ್ (28), ಮನೋಜ ರಾಜೇಂದ್ರ ಗುಣಗೆ (38), ಪಾಂಡುರಂಗ ಮಾಧವರಾವ ಸಂಗನಾಳೆ (20) ಎಂಬುವವರನ್ನು ಬಂಧಿಸಿದೆ.  

ಆರೋಪಿಗಳು ಬೀದರ್ ಜಿಲ್ಲೆಯ ವಿವಿಧೆಡೆ ಟ್ರಾಲಿ ಮತ್ತು ಕೃಷಿ ಉಪಕರಣಗಳನ್ನು ಕಳವು ಮಾಡಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಬಂಧಿತರಿಂದ ಟ್ರ್ಯಾಕ್ಟರ್ ಟ್ರಾಲಿಗಳು, ಚೆಸ್ಸಿಗಳು, ಕಬ್ಬಿಣದ ಕೂರಿಗೆ, ಕೃತ್ಯಕ್ಕೆ ಬಳಸಿದ ಜಾನ್‌ಡೀರ್ ಕಂಪನಿಯ ಟ್ರ್ಯಾಕ್ಟರ್ ಇಂಜಿನ್ ಹಾಗೂ ಒಂದು ಬೈಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಕರಣ ಭೇದಿಸಿದ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.