
ಪ್ರಜಾವಾಣಿ ವಾರ್ತೆ
ಭಾಲ್ಕಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಒಂದು ಗಂಟೆಗೂ ಹೆಚ್ಚು ಸಮಯ ಮಳೆ ಸುರಿದಿದೆ.
ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆಗಾಲದ ತಂಪಿನ ಅನುಭವ ನೀಡಿತು. ತಾಲ್ಲೂಕಿನ ಭಾತಂಬ್ರಾ, ಆನಂದವಾಡಿ, ನಿಡೇಬನ, ತಳವಾಡ ಎಂ. ರಾಮತೀರ್ಥ ವಾಡಿ, ಕಲವಾಡಿ, ಧಾರಜವಾಡಿ, ಕದಲಾಬಾದ, ಸಿದ್ದಾಪುರ ವಾಡಿ, ಕರಡ್ಯಾಳ, ತಳವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆ ಸುರಿದಿದೆ.
ಕೆಲ ಹೊಲಗಳಲ್ಲಿ ಅಲ್ಪ, ಸ್ವಲ್ಪ ನೀರು ನಿಂತಿದ್ದು ಕಂಡು ಬಂತು. ಗುರುವಾರ ಬೆಳಿಗ್ಗೆಯಿಂದ ಸಂಜೆ 4 ಗಂಟೆಯವರೆಗೆ ತುಂಬಾ ಬಿಸಿಲು, ಧಗೆಯಿಂದ ಜನರು ಬೇವರಿದ್ದರು. ಸಂಜೆ ಸುರಿದ ಮಳೆಗೆ ಎಲ್ಲೆಡೆ ತಣ್ಣನೆಯ ವಾತಾವರಣ ನಿರ್ಮಾಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.