ADVERTISEMENT

ಬಸವಣ್ಣನವರ ನಿಂದಕರಿಗೆ ಉಳಿಗಾಲವಿಲ್ಲ: ಚನ್ನವೀರ ಶಿವಾಚಾರ್ಯರು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 5:53 IST
Last Updated 26 ಸೆಪ್ಟೆಂಬರ್ 2025, 5:53 IST
<div class="paragraphs"><p>ಚನ್ನವೀರ ಶಿವಾಚಾರ್ಯರು</p></div>

ಚನ್ನವೀರ ಶಿವಾಚಾರ್ಯರು

   

ಬಸವಕಲ್ಯಾಣ: ‘ಬಸವಣ್ಣನವರ ನಿಂದಕರಿಗೆ ಉಳಿಗಾಲವಿಲ್ಲ’ ಎಂದು ಹಾರಕೂಡ ಚನ್ನವೀರ ಶಿವಚಾರ್ಯರು ಈಚೆಗೆ ನಡೆದ ದಸರಾ ಧರ್ಮ ಸಮ್ಮೇಳನದ ಪ್ರಥಮ ದಿನದ ರಾತ್ರಿಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

‘ಬಸವಣ್ಣನವರನ್ನು ಯಾರು ಟೀಕೆ ಮಾಡುತ್ತಾರೋ, ಬಸವತತ್ವವನ್ನು ಯಾರು ಅವಹೇಳನ ಮಾಡುತ್ತಾರೋ ಅವರ ಅಂತಿಮ ದಿನ ಸಮೀಪಿಸಿದೆ ಎಂದರ್ಥ. ಬಸವಣ್ಣನವರು ಕಲ್ಯಾಣದಲ್ಲಿ ಅನುಭವ ಮಂಟಪ ಕಟ್ಟಿದರು. ವಚನ ಸಾಹಿತ್ಯ ಬರೆದರು. ಅವರ ನಡೆ ಮತ್ತು ನುಡಿ ಒಂದಾಗಿತ್ತು. ಹಾರಕೂಡ ಮಠ ಸಹ ಅವರ ವಚನಗಳನ್ನು ಪ್ರಕಟಿಸಿದೆ. ₹ 50 ಲಕ್ಷ ವೆಚ್ಚದಿಂದ 15 ವಚನ ಸಂಪುಟಗಳನ್ನು ಮುದ್ರಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.