ADVERTISEMENT

ಸಮಾಜ ಸೇವೆಗೆ ಸಂಘಟನೆ ಅಗತ್ಯ: ಸದಾನಂದ ಬಿರಾದಾರ

​ಪ್ರಜಾವಾಣಿ ವಾರ್ತೆ
Published 25 ಮೇ 2022, 4:01 IST
Last Updated 25 ಮೇ 2022, 4:01 IST
ಬಸವಕಲ್ಯಾಣದಲ್ಲಿ ಮಂಗಳವಾರ ನಡೆದ ಛತ್ರಪತಿ ಶಾಹು ಮಹಾರಾಜ ಮರಾಠಾ ಸೇವಾ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು
ಬಸವಕಲ್ಯಾಣದಲ್ಲಿ ಮಂಗಳವಾರ ನಡೆದ ಛತ್ರಪತಿ ಶಾಹು ಮಹಾರಾಜ ಮರಾಠಾ ಸೇವಾ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು   

ಬಸವಕಲ್ಯಾಣ: ಸಮಾಜಸೇವೆ ಕೈಗೊಳ್ಳಲು ಸಂಘಟನೆಯ ಅಗತ್ಯವಿದೆ. ಉತ್ತಮ ಉದ್ದೇಶದಿಂದ ಛತ್ರಪತಿ ಶಾಹು ಮಹಾರಾಜ ಮರಾಠಾ ಸೇವಾ ಸಂಘ ರಚಿಸಲಾಗಿದೆ ಎಂದು ಸಂಘದ ಗೌರವ ಅಧ್ಯಕ್ಷ ಸದಾನಂದ ಬಿರಾದಾರ ಹೇಳಿದರು.

ನಗರದ ಗೋಸಾಯಿ ಓಣಿಯಲ್ಲಿನ ಮಹಂತ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಛತ್ರಪತಿ ಶಾಹು ಮಹಾರಾಜ ಮರಾಠಾ ಸೇವಾ ಸಂಘದ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಘದ ಅಧ್ಯಕ್ಷ ರಾಜಕುಮಾರ ಭೋಸಲೆ ಮಾತನಾಡಿ, ಮರಾಠಾ ಸಮಾಜದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಯತ್ನಿಸಲಾಗುವುದು ಎಂದರು.

ADVERTISEMENT

ಸತೀಶ ಬಿರಾದಾರ ಮಾತನಾಡಿದರು. ಮಹಂತ ಮಠದ ಜಗದೀಶಗಿರಿ ಜಹಾಗೀರದಾರ ಭಾವಚಿತ್ರದ ಪೂಜೆ ನೆರವೆರಿಸಿದರು.

ಪದಾಧಿಕಾರಿಗಳು: ಈ ವೇಳೆ ಸಂಘದ ಪದಾಧಿಕಾರಿಗಳನ್ನು ನೇಮಿಸಲಾಯಿತು. ಸದಾನಂದ ಬಿರಾದಾರ (ಗೌರವ ಅಧ್ಯಕ್ಷ), ರಾಜಕುಮಾರ ಭೋಸಲೆ(ಅಧ್ಯಕ್ಷ), ಲಕ್ಷ್ಮಣ ಕಪನೂರೆ (ಕಾರ್ಯಾಧ್ಯಕ್ಷ), ಅಮಯಗಿರಿ ಜಹಾಗೀರದಾರ (ಉಪಾಧ್ಯಕ್ಷ/ ಖಜಾಂಚಿ), ಪರಮೇಶ್ವರ ಬಿರಾದಾರ(ಉಪಾಧ್ಯಕ್ಷ), ಸೂರಜ್ ಪಾಟೀಲ(ಪ್ರಧಾನ ಕಾರ್ಯದರ್ಶಿ), ಸತೀಶ ಬಿರಾದಾರ(ಕಾರ್ಯದರ್ಶಿ), ರಾಹುಲ್ ಪಾಟೀಲ(ಜಂಟಿ ಕಾರ್ಯ ದರ್ಶಿ), ದಿನೇಶ ಭೋಸಲೆ(ಸಂಘಟನಾ ಕಾರ್ಯದರ್ಶಿ) ಹಾಗೂ ನಿರ್ದೇಶಕರನ್ನಾಗಿ ಪ್ರದೀಪ ಶಿಂಧೆ, ಸಾಗರ ಜಾಧವ, ಈಶ್ವರ ಗವಳಿ, ಗುಂಡಾಜಿ ಜಾಧವ, ಅರವಿಂದ ಪವಾರ ಅವರನ್ನು ನೇಮಿಸಲಾಗಿದೆ.

ಸಭೆಯಲ್ಲಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.