ಬೀದರ್: ಲಾಕ್ಡೌನ್ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರು ಬಡ ಕುಟುಂಬಗಳಿಗೆ ಸಹಾಯಹಸ್ತ ಚಾಚಿದ್ದಾರೆ.
ನಾಗಮಾರಪಳ್ಳಿ ಅವರ ಪರವಾಗಿ ನೌಬಾದ್ ಹಾಗೂ ಚೊಂಡಿ ಗ್ರಾಮದ 25 ಬಡ ಕುಟುಂಬಗಳಿಗೆ ತಲಾ ಒಂದು ಪಾಕೇಟ್ ಅಕ್ಕಿ, 5 ಕೆ.ಜಿ. ಬೇಳೆ, ಸಕ್ಕರೆ, ಎಣ್ಣೆ ಮತ್ತಿತರ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿಠ್ಠಲರೆಡ್ಡಿ ಯಡಮಲ್ಲೆ ದಿನಸಿ ಸಾಮಗ್ರಿಗಳ ಪೊಟ್ಟಣ ವಿತರಿಸಿದರು.
ಸಹಾರ್ದ ತರಬೇತಿ ಕೇಂದ್ರದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು, ಶಾರದಾ ರುಡ್ಸೆಟ್ ನಿರ್ದೇಶಕ ಶಿವಪ್ರಸಾದ, ಅನಿಲ ಪರಶೆಣ್ಣೆ, ನಾಗಶೆಟ್ಟಿ ಘೋಡಂಪಳ್ಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.