ADVERTISEMENT

ಪೌರ ಕಾರ್ಮಿಕರಿಗೆ ಹಣ್ಣು ವಿತರಿಸಿ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 11:10 IST
Last Updated 12 ನವೆಂಬರ್ 2022, 11:10 IST
ಬೀದರ್‌ನಲ್ಲಿ ನಗರಸಭೆ ಸದಸ್ಯ ನಿತಿನ್ ಕರ್ಪೂರ ಅವರು ತಮ್ಮ ಜನ್ಮದಿನದ ಪ್ರಯುಕ್ತ ಪೌರ ಕಾರ್ಮಿಕರಿಗೆ ಹಣ್ಣು ವಿತರಿಸಿದರು
ಬೀದರ್‌ನಲ್ಲಿ ನಗರಸಭೆ ಸದಸ್ಯ ನಿತಿನ್ ಕರ್ಪೂರ ಅವರು ತಮ್ಮ ಜನ್ಮದಿನದ ಪ್ರಯುಕ್ತ ಪೌರ ಕಾರ್ಮಿಕರಿಗೆ ಹಣ್ಣು ವಿತರಿಸಿದರು   

ಬೀದರ್: ನಗರಸಭೆ ಸದಸ್ಯ ನಿತಿನ್ ಕರ್ಪೂರ ನಗರದಲ್ಲಿ ಪೌರ ಕಾರ್ಮಿಕರಿಗೆ ಹಣ್ಣು ವಿತರಿಸಿ ತಮ್ಮ 42ನೇ ಜನ್ಮದಿನ ಆಚರಿಸಿಕೊಂಡರು.

ನಗರಸಭೆಯ ಹಳೆಯ ಕಚೇರಿಯಲ್ಲಿ ಒಟ್ಟು 125 ಪೌರ ಕಾರ್ಮಿಕರಿಗೆ ಹಣ್ಣಿನ ಬ್ಯಾಸ್ಕೆಟ್‍ಗಳನ್ನು ವಿತರಿಸಿದರು.
ನಗರ ಸ್ವಚ್ಛತೆ ಹಾಗೂ ಸೌಂದರ್ಯೀಕರಣದಲ್ಲಿ ಪೌರ ಕಾರ್ಮಿಕರ ಪಾತ್ರ ಬಹಳ ಮಹತ್ವದ್ದಾಗಿದೆ. ಹೀಗಾಗಿ ಅವರನ್ನು ಗೌರವಿಸಲು ಅವರೊಂದಿಗೆ ಜನ್ಮದಿನ ಆಚರಿಸಿಕೊಂಡಿದ್ದೇನೆ ಎಂದು ನಿತಿನ್ ಕರ್ಪೂರ ತಿಳಿಸಿದರು.

ನಗರಸಭೆ ಆಯುಕ್ತ ಪ್ರಬುದ್ಧ ಕಾಂಬಳೆ, ಪರಿಸರ ಎಂಜಿನಿಯರ್ ರವೀಂದ್ರ ಕಾಂಬಳೆ, ಡಾ. ಸುಭಾಷ್ ಕರ್ಪೂರ, ಪ್ರಮುಖರಾದ ಕೈಲಾಸ ಧೂಪೆ, ನಾಗರಾಜ ಕರ್ಪೂರ, ಮಾಣಿಕ ಕರ್ಪೂರ, ಸಿದ್ಧರಾಮೇಶ್ವರ ಶೆಟಕಾರ್, ಪ್ರವೀಣ ಕರ್ಪೂರ, ನಿಶಾಂತ ಕರ್ಪೂರ, ಸತೀಶ ಸ್ವಾಮಿ, ನಿತಿನ್ ನವಲಕಿಲೆ, ರವೀಂದ್ರ ವಟಗೆ, ಆಕಾಶ ಕರ್ಪೂರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.