ಬೀದರ್: ಜಿಲ್ಲೆಯಲ್ಲಿ ಗುರುವಾರ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ಮುಂದುವರಿಸಿದರು. ಮಹಾರಾಷ್ಟ್ರ ಹಾಗೂ ತೆಲಂಗಾಣದ ಬಸ್ಗಳು ಜಿಲ್ಲೆಯಲ್ಲಿ ಸಂಚರಿಸಿದವು, ಖಾಸಗಿ ಬಸ್ಗಳ ಸೇವೆ ಮುಂದುವರಿಯಿತು. ನೌಕರರು ಮುಷ್ಕರ ನಡೆಸುತ್ತಿರುವ ಮಾಹಿತಿ ಇದ್ದ ಕಾರಣ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇತ್ತು.
ಖಾಸ್ ಬಸ್ಗಳು ಹಾಗೂ ಕ್ರೂಸರ್ಗಳಿಗೆ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿರುವ ಎಲ್ಲ ಬಸ್ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ನೆರೆಯ ರಾಜ್ಯ ಹಾಗೂ ಜಿಲ್ಲೆಯ ಪಟ್ಟಣಗಳಿಗೆ ಹೋಗಬೇಕಿದ್ದ ಪ್ರಯಾಣಿಕರು ಖಾಸಗಿ ವಾಹನಗಳಲ್ಲಿ ಪ್ರಯಾಣ ಮಾಡಿದರು.
ಬೀದರ್ ಘಟಕದ ಒಂದು ಬಸ್ ಗುರುವಾರ ಬೀದರ್ನಿಂದ ಜಹೀರಾಬಾದ್ ವರೆಗೆ ತೆರಳಿತು. ಬಸ್ ಪೂರ್ಣ ಭರ್ತಿಯಾಗಿತ್ತು. ಬಸ್ಗೆ ನೌಕರರು ಅಡತಡೆ ಉಂಟು ಮಾಡಲಿಲ್ಲ. ಆದರೆ, ದೂರದ ಊರುಗಳಿಗೆ ಹೋಗಬೇಕಿದ್ದ ಪ್ರಯಾಣಿಕರು ಗುರುವಾರ ತೊಂದರೆ ಅನುಭವಿಸಬೇಕಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.