ADVERTISEMENT

ಬೀದರ್: ನಿರಾಶ್ರಿತರಿಗೆ ಆಹಾರ ಪೊಟ್ಟಣ ವಿತರಣೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 13:12 IST
Last Updated 2 ಜೂನ್ 2021, 13:12 IST
ಬೀದರ್‌ನಲ್ಲಿ ನಮ್ಮ ಬೀದರ್ ಯುವ ಚೇತನ ಅಭಿವೃದ್ಧಿ ಸಂಘದಿಂದ ಉಚಿತ ಆಹಾರ ಪೊಟ್ಟಣ ಹಾಗೂ ನೀರಿನ ಬಾಟಲಿ ವಿತರಿಸಲಾಯಿತು
ಬೀದರ್‌ನಲ್ಲಿ ನಮ್ಮ ಬೀದರ್ ಯುವ ಚೇತನ ಅಭಿವೃದ್ಧಿ ಸಂಘದಿಂದ ಉಚಿತ ಆಹಾರ ಪೊಟ್ಟಣ ಹಾಗೂ ನೀರಿನ ಬಾಟಲಿ ವಿತರಿಸಲಾಯಿತು   

ಬೀದರ್: ನಮ್ಮ ಬೀದರ್ ಯುವ ಚೇತನ ಅಭಿವೃದ್ಧಿ ಸಂಘದ ವತಿಯಿಂದ ನಗರದಲ್ಲಿ ನಿರಾಶ್ರಿತರು ಹಾಗೂ ಬಡವರಿಗೆ ಆಹಾರ ಪೊಟ್ಟಣ ಹಾಗೂ ನೀರಿನ ಬಾಟಲಿ ವಿತರಿಸಲಾಯಿತು.

ಗುಂಪಾ, ರೈಲ್ವೆ ನಿಲ್ದಾಣ, ಕೆಇಬಿ ಹನುಮಾನ ಮಂದಿರ, ಗಾಂಧಿಗಂಜ್, ಪಾಪನಾಶ ಗೇಟ್, ಬಸ್ ನಿಲ್ದಾಣ ಸೇರಿ ವಿವಿಧೆಡೆ ಪೊಟ್ಟಣ ವಿತರಣೆ ಮಾಡಲಾಯಿತು.

‘18 ದಿನಗಳಿಂದ ನಿತ್ಯ 200ಕ್ಕೂ ಹೆಚ್ಚು ಆಹಾರ ಪೊಟ್ಟಣ ಹಾಗೂ ನೀರಿನ ಬಾಟಲಿ ಉಚಿತ ವಿತರಿಸಲಾಗುತ್ತಿದೆ. ಜೂನ್ 7ರ ವರೆಗೂ ಸೇವೆ ಮುಂದುವರಿಯಲಿದೆ’ ಎಂದು ಸಂಘದ ಅಧ್ಯಕ್ಷ ಪ್ರದೀಪ್ ಕಾಂಬಳೆ ತಿಳಿಸಿದರು.

ADVERTISEMENT

ದಿಲೀಪ್ ಮಿಲ್ಕಾಸಿಂಗ್, ರಜನಿ ಕಾಂತ ತಾರೆ, ಅಬ್ರಾಹಂ, ಸೋಮನಾಥ ಅಯಾಸಪುರೆ, ಸೋಮು ಚಳಕಾಪುರ, ಮಹೇಶ ಮೂರ್ತಿ, ಲಕ್ಷ್ಮೀಕಾಂತ ಗೂಡೆ, ನಾಗೇಶ ವರ್ಮಾ, ಪ್ರೀತಂ ಸಾಧುರೆ, ಸುಶೀಲ್ ಬೆಳ್ಳೂರೆ, ಅಮರ್, ರಾಹುಲ್ ಶಾಖೆ, ಆಕಾಶ ಕಾವೆ, ಹೇಮಂತ ಫುಲೇ ಕರ್, ರಜನಿಕಾಂತ ರಾಘಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.