ADVERTISEMENT

ಮರಖಲ್: ಬಡವರಿಗೆ ಆಹಾರಧಾನ್ಯ ವಿತರಣೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 17:22 IST
Last Updated 10 ಜೂನ್ 2021, 17:22 IST
ಬೀದರ್‌ ತಾಲ್ಲೂಕಿನ ಮರಖಲ್‌ ಗ್ರಾಮದಲ್ಲಿ ಬಡವರಿಗೆ ಆಹಾರಧಾನ್ಯದ ಕಿಟ್‌ ವಿತರಿಸಲಾಯಿತು
ಬೀದರ್‌ ತಾಲ್ಲೂಕಿನ ಮರಖಲ್‌ ಗ್ರಾಮದಲ್ಲಿ ಬಡವರಿಗೆ ಆಹಾರಧಾನ್ಯದ ಕಿಟ್‌ ವಿತರಿಸಲಾಯಿತು   

ಮರಖಲ್ (ಜನವಾಡ): ಅಜೀಂ ಪ್ರೇಮಜಿ ಫೌಂಡೇಷನ್ ನೆರವಿನೊಂದಿಗೆ ಆರ್ಬಿಟ್‌, ಕಾರ್ಮೆಲ್‌ ಸೇವಾ ಸಂಸ್ಥೆಯು
ಬೀದರ್‌ ತಾಲ್ಲೂಕಿನ ಮರಖಲ್ ಗ್ರಾಮದಲ್ಲಿ ಬಡ ಕೂಲಿ ಕಾರ್ಮಿಕರು, ಅಂಗವಿಕಲರು, ಕುಷ್ಠರೋಗಿಗಳು ಹಾಗೂ ವಿಧವೆಯರಿಗೆ ಆಹಾರಧಾನ್ಯ ಕಿಟ್‌ ವಿತರಿಸಿತು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗುನಳ್ಳಿ, ಮರಕಲ್ ಸೂಲ್ತಾನಪುರ, ರಸುಲಾಬಾದ್, ವಾಲದ್ದೋಡಿ, ಮಾಳೆಗಾಂವ, ಚಟ್ನಳ್ಳಿ, ಕಾನನ್ ಕಾಲೊನಿ ಹಾಗೂ ನವದಗೇರಿಯಲ್ಲಿ ಆಹಾರಧಾನ್ಯ ವಿತರಿಸಲಾಯಿತು.

ADVERTISEMENT

ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಕ್ರಿಸ್ತಿನಾ ಮಿಸ್ಕಿತ್, ಸೂರ್ಯಕಾಂತ ಹಾಗೂ ಸಂಸ್ಥೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.