
ಹುಮನಾಬಾದ್: ‘ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ್ದಾಗಿದ್ದು, ನಿಷ್ಠೆಯಿಂದ ವಿದ್ಯಾಬ್ಯಾಸ ಮಾಡಿದರೆ ಯಶಸ್ಸು ಸಾಧ್ಯ’ ಎಂದು ವಿಧಾನಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಹೇಳಿದರು.
ಪಟ್ಟಣದ ಹೊರವಲಯದ ಶಕುಂತಲಾ ಪಾಟೀಲ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವದಿಂದ ಕಾಣಬೇಕು. ಪ್ರತಿದಿನ ಹೂಸತನದ ಬಗ್ಗೆ ತಿಳಿದುಕೊಳ್ಳುವ ಹಂಬಲ ಮೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ನಿವೃತ್ತ ಮುಖ್ಯಶಿಕ್ಷಕ ಪಂಡಿತ ಬಾಳೂರೆ ಮಾತನಾಡಿ, ‘ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ’ ಎಂದರು.
ಪ್ರಾಂಶುಪಾಲ ವಿನಾಯಕ ಬಾರಡ್, ಪ್ರಮುಖರಾದ ಬ್ರಿಜೇಶಕುಮಾರ, ಮಂಜುನಾಥ ಕುಲಕರ್ಣಿ, ಜಿತೀನ್ ರಾಠೋಡ, ಶ್ರೀನಾಥ ಮೊರೆ, ರಂಜಿತ ಕಟ್ಟಿಮನಿ, ಪ್ರಶಾಂತ ರಾಜೋಳೆ, ಶೇಖ್ ಇಬ್ರಾಹಿಂ, ಶಿವಪ್ರಸಾದ ಪಾಟೀಲ, ಶರಣು ಮಡಿವಾಳ, ಕಾವ್ಯಶ್ರೀ ಪಾಟೀಲ ಕಾಂಚನಾ, ಪವನ ಪಾಟೀಲ, ಮಲ್ಲಿಕಾರ್ಜುನ ಸಂಗಶಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.