ADVERTISEMENT

ಔರಾದ್: ಎಂಟು ಸರಗಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 15:15 IST
Last Updated 15 ಜುಲೈ 2020, 15:15 IST
ಡಿವೈಎಸ್ಪಿ ದೇವರಾಜ ನೇತೃತ್ವದಲ್ಲಿ ಸಂತಪುರ ಪೊಲೀಸರು ಎಂಟು ಜನ ಸರಗಳ್ಳರನ್ನು ಬಂಧಿಸಿದರು
ಡಿವೈಎಸ್ಪಿ ದೇವರಾಜ ನೇತೃತ್ವದಲ್ಲಿ ಸಂತಪುರ ಪೊಲೀಸರು ಎಂಟು ಜನ ಸರಗಳ್ಳರನ್ನು ಬಂಧಿಸಿದರು   

ಔರಾದ್: ಮಹಿಳೆಯೊಬ್ಬರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಎಂಟು ಜನರನ್ನು ಇಲ್ಲಿನ ಸಂತಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹1.20 ಲಕ್ಷ ಮೌಲ್ಯದ ಚಿನ್ನದ ಸರ, ಎರಡು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ಬೀದರ್‌ ನಗರದ ಇರಾನಿ ಕಾಲೊನಿಯ ಮಹಮ್ಮದ್ ಅಲಿ, ಜಾಫರ್ ಅಜಮ್, ಗುಲಾಂ ರಸೂಲ್, ಹಸನ್ ನಯನ್, ಫರಿದಾ ಮಸ್ತಾನ, ನೀತು ಧೊಂಡಿಯಾ, ಸೇಲ್ವಾನಿ ಬೇಗಂ ಹಾಗೂ ಸಬಿಗುಲ್ ಹಸೇನ ಬಂಧಿತರು.

ಈ ಸರಗಳ್ಳರ ತಂಡ ಸಂತಪುರ ಗ್ರಾಮದ ಲಕ್ಷ್ಮಿ ದೇವಸ್ಥಾನದ ಹತ್ತಿರ ಮಂಗಳವಾರ ಅಂಬಿಕಾ ಎಂಬುವರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿತ್ತು. ಸುದ್ದಿ ತಿಳಿದ ಪೊಲೀಸರು ಇವರ ಬೆನ್ನಟ್ಟಿ ಸಿನಿಮೀಯ ಮಾದರಿಯಲ್ಲಿ ಬಂಧಿಸಿದ್ದಾರೆ.

ADVERTISEMENT

ಡಿವೈಎಸ್ಪಿ ದೇವರಾಜ ಅವರ ನೇತೃತ್ವದಲ್ಲಿ ಸಿಪಿಐ ಟಿ.ರಾಘವೇಂದ್ರ, ಪಿಎಸ್ಐ ಪ್ರಭಾಕರ್ ಪಾಟೀಲ, ಸುವರ್ಣ ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.