ADVERTISEMENT

‘ಜಾನಪದ ಜೀವನದ ಪ್ರತಿಬಿಂಬ’

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 5:39 IST
Last Updated 8 ಅಕ್ಟೋಬರ್ 2022, 5:39 IST
ಕಮಲನಗರ ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಜೈ ಭೀಮ ಗಾಯನ ಪಾರ್ಟಿ ವತಿಯಿಂದ ಗಾಯನ ಕಾರ್ಯಕ್ರಮ ನಡೆಯಿತು
ಕಮಲನಗರ ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಜೈ ಭೀಮ ಗಾಯನ ಪಾರ್ಟಿ ವತಿಯಿಂದ ಗಾಯನ ಕಾರ್ಯಕ್ರಮ ನಡೆಯಿತು   

ಕಮಲನಗರ: ‘ಜಾನಪದ ನಮ್ಮ ಜೀವನದ ಪ್ರತಿ ದರ್ಪಣ’ ಎಂದು ಸಾವಿತ್ರಿಬಾಯಿ ಜಾಧವ ಹೇಳಿದರು.

ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಜೈ ಭೀಮ ಗಾಯನ ಪಾರ್ಟಿ ವತಿಯಿಂದ ಕರ್ನಾಟಕ ಜಾನಪದ ಪರಿಷತ್ತು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಪ್ರಯೋಜಿತ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಗೀತ, ನಾಟಕಗಳು ಸಂಸ್ಕೃತಿಯನ್ನು ಶ್ರೀಮಂತಗೊಳಿಸುತ್ತವೆ. ಪ್ರದರ್ಶನಗಳ ಮೂಲಕ ಮಕ್ಕಳಿಗೆ ನಮ್ಮ ಭಾಗದ ಕುರಿತು ಅರಿವು ಮೂಡಿಸು ವ ಕೆಲಸ ಮಾಡಲಾಗಿದೆ ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯ ಮನೋಜಕುಮಾರ ಬಿರಾದಾರ, ಜಗನ್ನಾಥ ಮೇತ್ರೆ, ರೇಖಾಬಾಯಿ ಕಾಂಬಳೆ, ಇಂದ್ರಾಬಾಯಿ ಕಮನಿವಾಡೆ ಹಾಗೂ ಗ್ರಾಮಸ್ಥರು ಇದ್ದರು.

ಜೈ ಭೀಮ ಗಾಯನ ಪಾರ್ಟಿ ತಂಡದ ವತಿಯಿಂದ ಪ್ರದರ್ಶನಗಳು ನಡೆದವು. ತುಕಾರಾಮ ವಾಗಮಾರೆ ತಬಲಾ, ಗಣಪತಿ ಕಾಂಬಳೆ ಹಾರ್ಮೋನಿಯಂ ನುಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.