ಭಾಲ್ಕಿ: ತಾಲ್ಲೂಕಿನ ಖಟಕಚಿಂಚೋಳಿ ಗ್ರಾಮದ ಶಾಂತಲಿಂಗೇಶ್ವರ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ ಇರುಮುಡಿ ಮತ್ತು ಮಹಾಪಡಿ ಪೂಜಾ ಮಹೋತ್ಸವ ಕಾರ್ಯಕ್ರಮ ಜರುಗಿತು.
ಅಯ್ಯಪ್ಪ ಸ್ವಾಮಿ ಪೂಜೆಗಾಗಿ ಸುಂದರ ಮಂಟಪ ನಿರ್ಮಿಸಲಾಗಿತ್ತು. ಮಂಟಪದ ಎಡ ಬದಿಯಲ್ಲಿ ಸಂಕಷ್ಟ ನಿವಾರಕ ಗಣೇಶ, ಅಯ್ಯಪ್ಪ ಸ್ವಾಮಿ, ಕಾರ್ತಿಕೇಯ ಮೂರ್ತಿ ಸ್ಥಾಪಿಸಿ ಪೂಜೆ ಸಲ್ಲಿಸಲಾಯಿತು. ಅಯ್ಯಪ್ಪ ಸ್ವಾಮಿ ಮುಂಭಾಗದಲ್ಲಿ 18 ನಂದಾದೀಪ ಬೆಳಗಿಸಿ ಹೂ, ಹಣ್ಣು, ಕರ್ಪೂರಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಅಯ್ಯಪ್ಪನ ಭಜನೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಮಾಲಾಧಾರಿಗಳಾದ ನಾಗರಾಜ ಸಜ್ಜನಶೆಟ್ಟಿ, ಗುಂಡು ಸ್ವಾಮಿ, ನಾಗರಾಜ ಚಿಲಶೆಟ್ಟಿ, ಸಂತೋಷ್ ರೆಡ್ಡಿ, ಸತೀಶ ಸಂಗೋಳಗಿ, ಶೈಲೇಶ ಅಷ್ಟುರೆ, ಲೋಕೇಶ ಪವಾರ್, ಸೋಮಶೇಖರ ಕೋರಿ, ಸ್ವಾಮಿ ಭದ್ರೇಶ್, ಕಾಶಿನಾಥ, ಮೃತ್ಯುಂಜಯ, ರಾಹುಲ್ ಸುಂಟೆ, ಸಂಗಮೇಶ, ಅಭಿಷೇಕ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.