ಬೀದರ್: ಸಾರಿಗೆ ವಲಯದಲ್ಲಿ ಕನ್ನಡ ಜಾಗೃತಿ ಅಭಿಯಾನ ಇಲ್ಲಿಯ ವಿಮಾನ ನಿಲ್ದಾಣದಲ್ಲಿ ನಡೆಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಅಭಿಯಾನದ ಸದಸ್ಯರು, ಕನ್ನಡ ಬಳಕೆ ಸಂಬಂಧ ನಿಲ್ದಾಣದ ಪ್ರಭಾರ ಅಧಿಕಾರಿ ಅಮೀತ್ಕುಮಾರ ಮಿಶ್ರಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಾರಿಗೆ ವಲಯದಲ್ಲೂ ಕನ್ನಡ ರಾರಾಜಿಸಲಿ. ಕನ್ನಡ ನಾಡಿನಲ್ಲಿ ನೆಲೆಸಿದವರು ಸಂಹವನ ನಡೆಸುವಷ್ಟು ಕನ್ನಡ ಕಲಿಯಲಿ ಎನ್ನುವುದೇ ಅಭಿಯಾನದ ಉದ್ದೇಶವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಅಭಿಯಾನದ ಸದಸ್ಯ ವಿಜಯಕುಮಾರ ಸೋನಾರೆ ಹೇಳಿದರು.
ಅಭಿಯಾನದ ಸದಸ್ಯರಾದ ಸುನೀಲ್ ಭಾವಿಕಟ್ಟಿ, ಎಂ.ಪಿ. ಮುದಾಳೆ, ರವಿ ಕಾಂಬಳೆ, ಭಾಗಪ್ಪ ಎಚ್, ವಿಮಾನ ನಿಲ್ದಾಣದ ಸುರೇಂದ್ರ, ಅಭಿಷೇಕ, ಅಶೋಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.