ADVERTISEMENT

ವಿಠಲಪುರ: ಕಂದಾಯ ಗ್ರಾಮ ಘೋಷಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 10:44 IST
Last Updated 4 ಸೆಪ್ಟೆಂಬರ್ 2020, 10:44 IST
ಚಿಟಗುಪ್ಪ ತಹಶೀಲ್ದಾರ್ ಜಿಯಾವುಲ್ಲ ಅವರಿಗೆ ಕರವೇ ಪದಾಧಿಕಾರಿಗಳು ಮನವಿ ಸಲ್ಲಿಸಿದರು
ಚಿಟಗುಪ್ಪ ತಹಶೀಲ್ದಾರ್ ಜಿಯಾವುಲ್ಲ ಅವರಿಗೆ ಕರವೇ ಪದಾಧಿಕಾರಿಗಳು ಮನವಿ ಸಲ್ಲಿಸಿದರು   

ಚಿಟಗುಪ್ಪ: ತಾಲ್ಲೂಕಿನ ವಿಠಲಪುರವನ್ನು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಜಿಯಾವುಲ್ಲ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಕರವೇ ಪದಾಧಿಕಾರಿ ಮನೋಜ ಸಿತಾಳೆ ಮಾತನಾಡಿ,‘ವಿಠಲಪುರ ಗ್ರಾಮ ಹೋಬಳಿ ಕೇಂದ್ರ ಬೇಮಳಖೇಡಾದಿಂದ ಸುಮಾರು 6 ಕಿ.ಮೀ ದೂರದಲ್ಲಿದೆ. ಪ್ರತಿದಿನ ಸರ್ಕಾರಿ ಕೆಲಸಗಳಿಗೆ ಗ್ರಾಮಸ್ಥರು ಅಲ್ಲಿಗೆ ಹೋಗಬೇಕು. ಬಸ್ ಇಲ್ಲ. ನಡೆದುಕೊಂಡೇ ಹೋಗಬೇಕು.ಇದರಿಂದ ಸಮಸ್ಯೆ ಉಂಟಾಗುತ್ತಿದೆ. ಸದ್ಯ ವಿಠಲಪುರ ಗ್ರಾಮದ ಜನಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಅದನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಬೇಕು’ ಎಂದು ತಿಳಿಸಿದರು.

ವಿಠಲಪುರವನ್ನು ಪಕ್ಕದ ಚಾಂಗಲೇರಾ, ಮಿನಕೇರಾ ಗ್ರಾಮ ಪಂಚಾಯಿತಿಗಳಿಗೆ ಒಳಪಡಿಸಿದಲ್ಲಿ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ADVERTISEMENT

ಮಹೇಶ ಮಲಗಿ, ಸಚಿನ್‌ ಹಾರ್ಗೆ, ಜಗನ್ನಾಥ ಕಪ್ಪರಗಾಂವ್, ವಿಜಯಕುಮಾರ್‍ ಯಾದವ, ಪಾಂಡು ಯಾದವ, ಹಣಮಂತ ಬುರ್ಜಿನ್ ಹಾಗೂ ವೆಂಕಟ ಯಾದವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.