ADVERTISEMENT

ಮಾಂಜ್ರಾ ನದಿ ನೀರಿನ ಸೆಳೆತಕ್ಕೆ ವ್ಯಕ್ತಿ ನೀರು ಪಾಲು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2021, 5:18 IST
Last Updated 10 ಸೆಪ್ಟೆಂಬರ್ 2021, 5:18 IST

ಭಾಲ್ಕಿ: ತಾಲ್ಲೂಕಿನ ಲಖಣಗಾಂವ‌ ಗ್ರಾಮದ ಜ್ಞಾನೇಶ್ವರ ಸ್ವರೂಪರಾವ್ ಚಾಂದಿವಾಲೆ (50) ಅವರು ಬುಧವಾರ ಮಾಂಜ್ರಾ ನದಿ ನೀರಿನ ಸೆಳೆತಕ್ಕೆ ಸಿಲುಕಿ ನೀರು ಪಾಲಾಗಿದ್ದಾರೆ. ವ್ಯಾಪಕ ಮಳೆ ಆದ ಹಿನ್ನೆಲೆಯಲ್ಲಿ ಲಖಣಗಾಂವ ಸೇತುವೆ ಮೇಲಿಂದ ಮಾಂಜ್ರಾ ನದಿಯ ಹೆಚ್ಚುವರಿ ನೀರುಹರಿಯುತ್ತಿದೆ.

ಇದನ್ನು ಲೆಕ್ಕಿಸದೇ ಸೇತುವೆ ದಾಟಲು ಮುಂದಾದಾಗ ಈ ವ್ಯಕ್ತಿ ನೀರು ಪಾಲಾಗಿದ್ದಾರೆ. ವ್ಯಕ್ತಿಗಾಗಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಶೋಧ ಮುಂದುವರಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT