ADVERTISEMENT

ಏಕತೆಗೆ ಪ್ರಯತ್ನಿಸಿದ್ದ ನಾರಾಯಣಗುರು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 11:59 IST
Last Updated 4 ಸೆಪ್ಟೆಂಬರ್ 2020, 11:59 IST
ಬಸವಕಲ್ಯಾಣದಲ್ಲಿ ಆರ್ಯ ಈಡಿಗ ಸಮಾಜ ಸಂಘದಿಂದ ಈಚೆಗೆ ಬ್ರಹ್ಮರ್ಷಿ ನಾರಾಯಣಗುರು ಅವರ ಜಯಂತಿ ಆಚರಿಸಲಾಯಿತು
ಬಸವಕಲ್ಯಾಣದಲ್ಲಿ ಆರ್ಯ ಈಡಿಗ ಸಮಾಜ ಸಂಘದಿಂದ ಈಚೆಗೆ ಬ್ರಹ್ಮರ್ಷಿ ನಾರಾಯಣಗುರು ಅವರ ಜಯಂತಿ ಆಚರಿಸಲಾಯಿತು   

ಬಸವಕಲ್ಯಾಣ: ‘ಬ್ರಹ್ಮರ್ಷಿ ನಾರಾಯಣಗುರು ಅವರು ಸಮಾಜದ ಏಕತೆಗಾಗಿ ಪ್ರಯತ್ನಿಸಿದ್ದರಿಂದ ಲೋಕದಲ್ಲಿ ಅಜರಾಮರರಾಗಿ ಉಳಿದಿದ್ದಾರೆ’ ಎಂದು ಆರ್ಯ ಈಡಿಗ ಸಮಾಜದ ಮುಖಂಡ ಅರವಿಂದ ಮುತ್ತೆ ಅಭಿಪ್ರಾಯಪಟ್ಟರು.

ಇಲ್ಲಿ ಆರ್ಯ ಈಡಿಗ ಸಮಾಜ ಬಳಗ ಈಚೆಗೆ ಆಯೋಜಿಸಿದ್ದ ಬ್ರಹ್ಮರ್ಷಿ ನಾರಾಯಣಗುರು ಅವರ 166 ನೇ ಜಯಂತಿಯಲ್ಲಿ ಭಾವಚಿತ್ರದ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಅವರು ಮೂಢನಂಬಿಕೆ ಹೊಗಲಾಡಿಸಲು ಯತ್ನಿಸಿದ್ದರು. ಮಕ್ಕಳಿಗೆ ಶಿಕ್ಷಣ ನೀಡಿ ಪ್ರಗತಿ ಪಥದಲ್ಲಿ ಸಾಗಲು ಸಲಹೆ ನೀಡಿದ್ದರು. ಅವರ ತತ್ವದ ಪಾಲನೆ ಆಗಲಿ’ ಎಂದರು.

ADVERTISEMENT

ಸಮಾಜ ಬಳಗದ ಕಾರ್ಯದರ್ಶಿ ಸತೀಶ ತೆಲಂಗ್, ದಿಲೀಪ ಗೌಡ, ರಾಜೀವ ತೆಲಂಗ್, ಧೀರಜ್ ಭೂರಾಳೆ, ಪವನ ಮುತ್ತೆ, ಪ್ರದೀಪ ತೆಲಂಗ್, ಸನಿ ತೆಲಂಗ್, ಆಕಾಶ ತೆಲಂಗ್, ಅಭಿಜೀತ್ ಮುತ್ತೆ, ಬಾಲಾಜಿ ಮುತ್ತೆ ಹಾಗೂ ದೀಪಕ ತೆಲಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.