ADVERTISEMENT

ಚಿಟಗುಪ್ಪ | ವಿದ್ಯುತ್‌ ತಂತಿ ಸ್ಪರ್ಶ: 4 ಎಕರೆ ಕಬ್ಬು ಭಸ್ಮ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2023, 14:08 IST
Last Updated 10 ಡಿಸೆಂಬರ್ 2023, 14:08 IST
ಚಿಟಗುಪ್ಪ ತಾಲ್ಲೂಕು ನಿರ್ಣಾದ ರೈತ ಪ್ರಕಾಶ್‌ ಸಿದ್ದಣ್ಣ ಅವರ ತೋಟದಲ್ಲಿಯ ಕಬ್ಬು ವಿದ್ಯುತ್‌ ತಂತಿ ಸ್ಪರ್ಶದಿಂದ ಸುಟ್ಟು ಭಸ್ಮವಾಗಿರುವುದು
ಚಿಟಗುಪ್ಪ ತಾಲ್ಲೂಕು ನಿರ್ಣಾದ ರೈತ ಪ್ರಕಾಶ್‌ ಸಿದ್ದಣ್ಣ ಅವರ ತೋಟದಲ್ಲಿಯ ಕಬ್ಬು ವಿದ್ಯುತ್‌ ತಂತಿ ಸ್ಪರ್ಶದಿಂದ ಸುಟ್ಟು ಭಸ್ಮವಾಗಿರುವುದು   

ಚಿಟಗುಪ್ಪ: ವಿದ್ಯುತ್‌ ತಂತಿ ತಗುಲಿ ಶಾರ್ಟ್‌ ಸರ್ಕೀಟ್‌ನಿಂದಾಗಿ 4 ಎಕರೆ ಕಬ್ಬು ಬೆಂಕಿಗಾಹುತಿಯಾದ ಘಟನೆ ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪ್ರಕಾಶ್‌ ಸಿದ್ದಣ್ಣ ಅವರಿಗೆ ಸೇರಿದ ಕಬ್ಬಿನ ಫಸಲು ಬೆಂಕಿಗೆ ಆಹುತಿಯಾಗಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದಾಗಿ ಕಬ್ಬಿನ ಬೆಳೆ ಹಾನಿಯಾಗಿದ್ದು ಸೂಕ್ತ ಪರಿಹಾರ ನೀಡುವಂತೆ ತಾಲ್ಲೂಕು ಆಡಳಿತವನ್ನು ರೈತರು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.