ADVERTISEMENT

ಬಸವಕಲ್ಯಾಣ: ಟಿಕೆಟ್‌ಗೆ ಪ್ರಾರ್ಥಿಸಿ ಉರುಳುಸೇವೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 7:05 IST
Last Updated 24 ಜನವರಿ 2021, 7:05 IST
ಬಸವಕಲ್ಯಾಣ ತಾಲ್ಲೂಕಿನ ಮೋರಖಂಡಿಯ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಶರಣು ಸಲಗರಗೆ ಉಪ ಚುನಾವಣೆಯ ಬಿಜೆಪಿ ಟಿಕೆಟ್ ಸಿಗಲೆಂದು ಪ್ರಾರ್ಥಿಸಿ ಗಣೇಶ ಕುದರೆ ಉರುಳು ಸೇವೆ ಮಾಡಿದರು
ಬಸವಕಲ್ಯಾಣ ತಾಲ್ಲೂಕಿನ ಮೋರಖಂಡಿಯ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಶರಣು ಸಲಗರಗೆ ಉಪ ಚುನಾವಣೆಯ ಬಿಜೆಪಿ ಟಿಕೆಟ್ ಸಿಗಲೆಂದು ಪ್ರಾರ್ಥಿಸಿ ಗಣೇಶ ಕುದರೆ ಉರುಳು ಸೇವೆ ಮಾಡಿದರು   

ಬಸವಕಲ್ಯಾಣ: ತಾಲ್ಲೂಕಿನ ಮೋರಖಂಡಿಯ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಬಿಜೆಪಿ ಮುಖಂಡ ಶರಣು ಸಲಗರಗೆ ಇಲ್ಲಿನ ಉಪ ಚುನಾವಣೆಯ ಟಿಕೆಟ್ ಸಿಗಲೆಂದು ಪ್ರಾರ್ಥಿಸಿ ಯುವಕ ಗಣೇಶ ಕುದರೆ ಉರುಳುಸೇವೆ ನಡೆಸಿದರು.

ಇದಕ್ಕೂ ಮೊದಲು ಪ್ರತಾಪುರ ಗ್ರಾಮದಿಂದ ಮೋರಖಂಡಿವರೆಗೆ ಪಾದಯಾತ್ರೆ ನಡೆಯಿತು. ಪ್ರತಾಪುರ, ತಳಭೋಗ, ಮೋರಖಂಡಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರಮುಖರಾದ ಚಂದ್ರಕಾಂತ ಜಾಧವ, ಗಯಾಬಾಯಿ, ನಂದು ಕುಲಕರ್ಣಿ, ಶಿವಕುಮಾರ ಸ್ವಾಮಿ, ಬಸವರಾಜ ಉಸ್ತುರೆ, ಭೀಮಾ ಲಾಂಡಗೆ, ಸಂತೋಷ ಬಿರಾದಾರ, ಗಣೇಶ ಮಹಾಜನ, ರವಿ ಜಾಧವ, ಸಂಜೀವ ಮದಕಟ್ಟೆ, ಸಂಜೀವ ನಾಗರಾಳೆ, ವಿನೋದ ಮಹಾಜನ, ಶಂಕರ ಮದಕಟ್ಟೆ, ಪ್ರೀತಂ ಜಾಧವ, ಉಮೇಶ ಕುದ್ರೆ, ಶಶಿಕಾಂತ ಮಾನೆ, ಕರುಣಾ ಮಾನೆ, ಭಾನುದಾಸ ಜಾಧವ, ರವಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.