ADVERTISEMENT

ಬಸವಕಲ್ಯಾಣ: ಮೇಕೆ ನುಂಗಿದ ಹೆಬ್ಬಾವು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 15:43 IST
Last Updated 18 ನವೆಂಬರ್ 2022, 15:43 IST
ಬಸವಕಲ್ಯಾಣ ತಾಲ್ಲೂಕಿನ ಘಾಟಹಿಪ್ಪರ್ಗಾ ವ್ಯಾಪ್ತಿಯಲ್ಲಿ ಹೆಬ್ಬಾವು ಮೇಕೆಯನ್ನು ನುಂಗಿರುವುದು
ಬಸವಕಲ್ಯಾಣ ತಾಲ್ಲೂಕಿನ ಘಾಟಹಿಪ್ಪರ್ಗಾ ವ್ಯಾಪ್ತಿಯಲ್ಲಿ ಹೆಬ್ಬಾವು ಮೇಕೆಯನ್ನು ನುಂಗಿರುವುದು   

ಬಸವಕಲ್ಯಾಣ (ಬೀದರ್ ಜಿಲ್ಲೆ): ತಾಲ್ಲೂಕಿನ ಘಾಟಹಿಪ್ಪರ್ಗಾ ವ್ಯಾಪ್ತಿಯಲ್ಲಿನ ಗುಡ್ಡದಲ್ಲಿ ಹೆಬ್ಬಾವು ಜೀವಂತ ಮೇಕೆಯನ್ನು ನುಂಗಿದೆ. ಮೇಕೆಯು ಕುರಿಗಾಹಿ ರಾಜಕುಮಾರ ರೊಡ್ಡೆ ಎಂಬುವರಿಗೆ ಸೇರಿದೆ.

10 ಅಡಿಯಷ್ಟು ಉದ್ದದ ಹೆಬ್ಬಾವು, ಗುಡ್ಡದಲ್ಲಿ ಮೇಯುತ್ತಿದ್ದ ಮೇಕೆಯ ಮೇಲೆ ದಾಳಿ ನಡೆಸಿ ನುಂಗಿದೆ. ಇದರಿಂದ ಭಯಗೊಂಡ ರಾಜಕುಮಾರ ಗ್ರಾಮಸ್ಥರಿಗೆ ವಿಷಯ ತಿಳಿಸಿದರು. ಆಗ ಸ್ಥಳಕ್ಕೆ ಬಂದು ಉರಗ ತಜ್ಞ ಅಶೋಕಶೆಟ್ಟಿ ಗುಂಡೂರ ಜೊತೆಗೆ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯವರು ಪರಿಶೀಲಿಸಿದರು.

‘ಹೆಬ್ಬಾವಿಗೆ ಹೆಚ್ಚೇನೂ ತೊಂದರೆ ಮಾಡದೇ, ಅರಣ್ಯದಲ್ಲಿ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳಾದ ಮುರ್ತುಜಾ ಖಾದ್ರಿ, ಸಂತೋಷ ಯಾಚೆ, ನಿಸಾರ ಅಹಮದ್ ಇದ್ದರು.

ADVERTISEMENT
ಬಸವಕಲ್ಯಾಣ ತಾಲ್ಲೂಕಿನ ಘಾಟಹಿಪ್ಪರ್ಗಾ ವ್ಯಾಪ್ತಿಯಲ್ಲಿ ಹೆಬ್ಬಾವು ಮೇಕೆಯನ್ನು ನುಂಗಿರುವುದು
ಬಸವಕಲ್ಯಾಣ ತಾಲ್ಲೂಕಿನ ಘಾಟಹಿಪ್ಪರ್ಗಾ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯವರು ಗ್ರಾಮಸ್ಥರ ಸಹಾಯದಿಂದ ಹೆಬ್ಬಾವು ಹಿಡಿದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.