ADVERTISEMENT

ಮಾನವೀಯತೆ ಮೆರೆದ ಶಾಸಕ ರಹೀಂಖಾನ್

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 12:49 IST
Last Updated 1 ಏಪ್ರಿಲ್ 2020, 12:49 IST
ಬಡವರಿಗೆ ವಿತರಿಸಲು ಸಿದ್ಧಪಡಿಸಿದ ಆಹಾರ ಪೊಟ್ಟಣಗಳನ್ನು ಶಾಸಕ ರಹೀಂಖಾನ್ ಪರಿಶೀಲಿಸಿದರು
ಬಡವರಿಗೆ ವಿತರಿಸಲು ಸಿದ್ಧಪಡಿಸಿದ ಆಹಾರ ಪೊಟ್ಟಣಗಳನ್ನು ಶಾಸಕ ರಹೀಂಖಾನ್ ಪರಿಶೀಲಿಸಿದರು   

ಬೀದರ್: ಕೋವಿಡ್ 19 ಸೋಂಕಿನ ಕಾರಣ ಬೀದರ್ ಶಾಸಕ ರಹೀಂಖಾನ್ ಅವರು ಬಡವರಿಗೆ ಆಹಾರ ಪೊಟ್ಟಣ ವಿತರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.

ಬೀದರ್ ನಗರದ ಎಲ್ಲ 35 ವಾರ್ಡ್ ಹಾಗೂ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಇರುವ ಕಡು ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಅವರು ಆಹಾರ ಪೊಟ್ಟಣ ವಿತರಿಸುತ್ತಿದ್ದಾರೆ. ವಾರ್ಡ್ ಹಾಗೂ ಗ್ರಾಮಗಳ ತಲಾ ಮೂವರು ಮುಖ್ಯಸ್ಥರಿಂದ ಗುರುತಿಸಲಾದ ಅರ್ಹ ಫಲಾನುಭವಿಗಳಿಗೆ ಅಕ್ಕಿ, ಬೇಳೆ, ಎಣ್ಣೆ, ಖಾರ, ಉಪ್ಪು ಮೊದಲಾದ ಅಗತ್ಯ ದಿನ ಬಳಕೆ ವಸ್ತುಗಳ ಆಹಾರ ಪೊಟ್ಟಣ ಉಚಿತವಾಗಿ ಕೊಡುತ್ತಿದ್ದಾರೆ.

‘ದೇವರು ಕೊಟ್ಟ ಸಂಪತ್ತಿನಲ್ಲಿ ಹಿಂದಿನಿಂದಲೂ ದಾನ ಧರ್ಮ ಮಾಡುತ್ತ ಬಂದಿದ್ದೇನೆ. ಅದನ್ನು ನಿರಂತರ ಮುಂದುವರಿಸಿಕೊಂಡು ಹೋಗಲಿದ್ದೇನೆ. ಈಗ ಕೋವಿಡ್‌ 19 ಸೋಂಕಿನಿಂದ ಕಷ್ಟದಲ್ಲಿರುವವರಿಗೆ ಆಹಾರ ಪೊಟ್ಟಣ ವಿತರಿಸಿ ಅಳಿಲು ಸೇವೆ ಸಲ್ಲಿಸಿದ್ದೇನೆ. ಮಾನವೀಯ ನೆಲೆಯಲ್ಲಿ ಮಾಡಬೇಕಾದ ಕೆಲಸವನ್ನು ಮಾಡಿದ್ದೇನೆ ಅಷ್ಟೇ’ ಎಂದು ರಹೀಂಖಾನ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.