ಚಿಟಗುಪ್ಪ: ಇಲ್ಲಿನ ಶಿಕ್ಷಕರ ಕಾಲೊನಿ ಹಾಗೂ ಮಹಾದೇವಿ ನಗರದಲ್ಲಿ ಭಾನುವಾರ ಕಳ್ಳರು ಮೂರು ಮನೆಗಳ ಕೀಲಿ ಮುರಿದು ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿದ್ದಾರೆ.
ಕೇಸು ರಾಠೋಡ್ ಅವರ ಮನೆಯಲ್ಲಿದ್ದ ಬಂಗಾರದ ಲಾಕೇಟ್, ಉಂಗುರ, ಕಿವಿಯೋಲೆ ಸೇರಿ ಒಟ್ಟು ₹45 ಸಾವಿರ ಮೌಲ್ಯದ ಸಾಮಗ್ರಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಇನ್ನೆರಡು ಮನೆಗಳಲ್ಲಿ ಯಾವ ವಸ್ತುಗಳೂ ಸಿಗದ ಕಾರಣ ಸಾಮಗ್ರಿಗಳನ್ನು ಎಲ್ಲೆಡೆ ಚೆಲ್ಲಿ ಪರಾರಿಯಾಗಿದ್ದಾರೆ.
ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.