ಬೀದರ್: ಭಾರತೀಯ ವಾಯುಪಡೆ ತರಬೇತಿ ವಿಭಾಗದ ಮುಖ್ಯಸ್ಥ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಅವರು ಬೀದರ್ ವಾಯುನೆಲೆಗೆ ಭೇಟಿ ನೀಡಿದರು.
ಬೀದರ್ ವಾಯುನೆಲೆಯ ಮುಖ್ಯಸ್ಥ ಏರ್ ಕಮೊಡೋರ್ ಸಮೀರ್ ಸೊಂಧಿ ಸ್ವಾಗತಿಸಿದರು. ವಾಯುಪಡೆಯ ಸೈನಿಕರು ಅವರಿಗೆ ಗೌರವ ವಂದನೆ ಸಮರ್ಪಿಸಿದರು.
ಸಿಂಗ್ ಅವರು ವಾಯುನೆಲೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಸಿಬ್ಬಂದಿ, ವಿದ್ಯಾರ್ಥಿ ಹಾಗೂ ಸ್ಥಳೀಯ ನಾಗರಿಕ ರೊಂದಿಗೆ ಸಮಾಲೋಚನೆ ನಡೆಸಿದರು. ವಾಯು ಸೇನೆ ಹಾಗೂ ನಮ್ಮ ದೇಶ ಹೆಮ್ಮೆ ಪಡುವಂತೆ ಗರ್ವದಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.