ADVERTISEMENT

ರಾಯಚೂರು: ಬಸನಗೌಡ ತುರ್ವಿಹಾಳ ಕಾಂಗ್ರೆಸ್‌ ಸೇರ್ಪಡೆ ಖಚಿತ!

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 9:55 IST
Last Updated 6 ನವೆಂಬರ್ 2020, 9:55 IST
ಬಿಜೆಪಿ ಮುಖಂಡ ಬಸನಗೌಡ ತುರ್ವಿಹಾಳ
ಬಿಜೆಪಿ ಮುಖಂಡ ಬಸನಗೌಡ ತುರ್ವಿಹಾಳ   

ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ರಾಜಕೀಯ ಮತ್ತೆ ಹೊಸ ತಿರುವು ಪಡೆದಿದ್ದು, ಬಿಜೆಪಿ ಮುಖಂಡ ಬಸನಗೌಡ ತುರ್ವಿಹಾಳ ಅವರು ಕಾಂಗ್ರೆಸ್‌ ಪಕ್ಷ ಸೇರ್ಪಡೆ ಆಗುವುದು ಬಹುತೇಕ ಖಚಿತವಾಗಿದೆ.

ಕಾಂಗ್ರೆಸ್‌ ವರಿಷ್ಠರ ಜೊತೆ ಬೆಂಗಳೂರಿನಲ್ಲಿ, ಗುರುವಾರ ಬೆಂಬಲಿಗರೊಂದಿಗೆ ಬಸನಗೌಡ ಅವರು ಮಾತುಕತೆ ಮಾಡಿರುವುದು ಫಲಪ್ರದವಾಗಿದೆ. ಕಾಂಗ್ರೆಸ್‌ ಸೇರ್ಪಡೆ ಆಗುತ್ತಿರುವುದನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಕ್ಕೆ ವೇದಿಕೆ ಕೂಡಾ ಸಜ್ಜಾಗಿದೆ ಎಂದು ಬೆಂಬಲಿಗರೆ ಅಧಿಕೃತವಾಗಿ ಹೇಳುತ್ತಿದ್ದಾರೆ.

ಇದರಿಂದ ಉಪಚುನಾವಣೆ ಘೋಷಣೆ ಪೂರ್ವದಲ್ಲಿಯೇ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿ ಶುರುವಾಗಲಿದೆ. 2018 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳಾಗಿದ್ದ ಬಸನಗೌಡ ತುರ್ವಿಹಾಳ ಮತ್ತು ಪ್ರತಾಪಗೌಡ ಪಾಟೀಲ ಅವರು ಮತ್ತೆ ಎದುರಾಳಿಗಳಾಗಿ ಸೆಣಸಾಟಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಪಕ್ಷಗಳನ್ನು ಅದಲು ಬದಲು ಮಾಡಿಕೊಂಡು ಸ್ಪರ್ಧಿಸುತ್ತಿರುವುದು ಗಮನಾರ್ಹ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.