ADVERTISEMENT

ಶೌಚಾಲಯ ಬಾಗಿಲು ತೆರೆಯಿರಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 5:53 IST
Last Updated 24 ಅಕ್ಟೋಬರ್ 2017, 5:53 IST

ಚಾಮರಾಜನಗರ: ನಗರದ ರಾಮಸಮುದ್ರದಲ್ಲಿರುವ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಿ ಏಳು ವರ್ಷ ಕಳೆದರೂ ಬಳಕೆಗೆ ಮುಕ್ತವಾಗಿಲ್ಲ.
ರಾಮಸಮುದ್ರದಿಂದ ಹರಳುಕೋಟೆಗೆ ತೆರಳುವ ಮಾರ್ಗದ ಅಂಗನವಾಡಿ ಸಮೀಪ ಈ ಶೌಚಾಲಯ ನಿರ್ಮಿಸಲಾಗಿದೆ. ವಾರ್ಡ್‌ನ ಹಿಂದಿನ ನಗರಸಭಾ ಸದಸ್ಯರು ಈ ಭಾಗದ ಜನರಿಗೆ ಅನುಕೂಲವಾಗಲೆಂದು ಶೌಚಾಲಯ ಮಂಜೂರು ಮಾಡಿಸಿ, ನಿರ್ಮಿಸಿದ್ದರು.

ಕಾಮಗಾರಿ ಸುಸಜ್ಜಿತವಾಗಿ ನಡೆದಿದ್ದು, ನೀರಿನ ಸಂಪರ್ಕವನ್ನೂ ಕಲ್ಪಿಸಲಾಗಿತ್ತು. ಆದರೆ, ಈವರೆಗೂ ಅದರ ಬಾಗಿಲು ತೆರೆದೇ ಇಲ್ಲ. ಇದರಿಂದ ಶೌಚಾಲಯ ಇದ್ದೂ ಇಲ್ಲದಂತಾಗಿದೆ ಎನ್ನುವುದು ಸ್ಥಳೀಯರ ಅಳಲು.

ಕೆಲವು ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿಲ್ಲ. ಅಂತಹವರು ಈಗಲೂ ಬಯಲನ್ನೇ ಅವಲಂಬಿಸುವಂತಾಗಿದೆ. ಶೌಚಾಲಯ ತೆರೆದರೆ ಅವರಿಗೆ ಸಹಾಯವಾಗಲಿದೆ.

ADVERTISEMENT

ಅಲ್ಲದೆ, ಕೂಲಿ ಕಾರ್ಮಿಕರು, ಅಂಗನವಾಡಿಗೆ ಬರುವ ಸಹಾಯಕರು, ಮಕ್ಕಳಿಗೆ ಅನುಕೂಲವಾಗಲಿದೆ. ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.