ADVERTISEMENT

ಬಂಡೀಪುರ: 20 ಹಸು, ಮೇಕೆ ಬಲಿ ಪಡೆದಿದ್ದ ಹುಲಿ ಸೆರೆ

​ಪ್ರಜಾವಾಣಿ ವಾರ್ತೆ
Published 19 ಮೇ 2020, 7:45 IST
Last Updated 19 ಮೇ 2020, 7:45 IST
   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ವ್ಯಾಪ್ತಿಯಲ್ಲಿ ಸುಮಾರು 20 ಹಸು ಮತ್ತು ಮೇಕೆ ಬಲಿ ಪಡೆದಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಮಂಗಳವಾರ ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಬೆಳಿಗ್ಗೆಯಿಂದ ಸಿಬ್ಬಂದಿ ಮತ್ತು ವೈದ್ಯರು ಆನೆಗಳ ಸಹಾಯದಿಂದ ಹುಲಿಗೆ ಪತ್ತೆಗೆ ಹುಡುಕಾಡಿದರು. ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಅಕ್ರಂ ಎಂಬುವವರು ಹುಲಿ ಅರಿವಳಿಕೆ ಚುಚ್ಚುಮದ್ದು ಶೂಟ್ ಮಾಡಲು ಯಶಸ್ವಿಯಾದರು.

ಬಳಿಕ ಹುಲಿಯು ಕುಂದುಕೆರೆ ವಲಯದ ಪರಮೇಶ್ವರಪ್ಪ ಅವರ ಜಮೀನ ಬಳಿಸೆರೆಯಾಯಿತು.

ADVERTISEMENT

ಜಯಪ್ರಕಾಶ, ಪಾರ್ಥಸಾರಥಿ ಗಣೇಶ, ರೋಹಿತ ಸಾಕಾನೆಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡವು.

ಕುಂದುಕೆರೆ ವಲಯದ ಚಿರಕನಹಳ್ಳಿ, ಕಡಬೂರು, ಕುಂದುಕೆರೆ, ಮಾಲಾಪುರ, ಬೊಮ್ಮನಹಳ್ಳಿ, ವಡ್ಡಗೆರೆ ಭಾಗದ ಜನರಿಗೆ ಈ ಹುಲಿಯಿಂದ ಹೆಚ್ಚು ತೊಂದರೆ ಆಗಿತ್ತು. ಸದ್ಯ ಹುಲಿಯನ್ನು ಸೆರೆಹಿಡಿದಿರುವುದರಿಂದ ಸುತ್ತಮುತ್ತಲಿನ ರೈತರಿಗೆ ಜನರು ನೆಮ್ಮದಿ ತಂದಿದೆ.

ಸೆರೆ ಹಿಡಿದ ಹುಲಿಯನ್ನು ಎಲ್ಲಿಗೆ ಬಿಡಬೇಕು ಎಂದು ಪಿಸಿಸಿಎಫ್ ಅವರು ತೀರ್ಮಾನ ಮಾಡಬೇಕು ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.