ADVERTISEMENT

ಚಾಮರಾಜನಗರ: ಕಿರಗಸೂರು ಗ್ರಾಮದಲ್ಲಿ 10 ಮನೆಗೆ ನುಗ್ಗಿದ ನೀರು, ಅಂಗಡಿಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 5:27 IST
Last Updated 29 ಆಗಸ್ಟ್ 2022, 5:27 IST
   

ಚಾಮರಾಜನಗರ: ತಾಲ್ಲೂಕಿನ ಕಿರಗಸೂರು ಗ್ರಾಮದಲ್ಲಿ ಸೋಮವಾರ ಸುರಿದ ಧಾರಾಕಾರ ಮಳೆಯಿಂದ ಹತ್ತು ಮನೆಗಳಿಗೆ ನೀರು ನುಗ್ಗಿದೆ. ಬಸಪ್ಪ ಎಂಬುವವರ ಅಂಗಡಿ ಜಲಾವೃತಗೊಂಡಿದೆ.

ತುಂಬಿ ಹರಿಯುತ್ತಿದ್ದ ಅಡ್ಡ ಹಳ್ಳದ ನೀರು ಗ್ರಾಮಕ್ಕೆ ನುಗ್ಗಿದ್ದು ರಸ್ತೆಗಳಲ್ಲಿ ನೀರು ಕಾಲುವೆಯಂತೆ ಹರಿಯುತ್ತಿದೆ‌. ಹೊಲಘಟ್ಟ ಕೆರೆಯು ತುಂಬಿ ನೀರು ಮಾದಾಪುರ -ಕಿರಗಸೂರು ಸಂಪರ್ಕಿಸುವ ರಸ್ತೆಯಲ್ಲಿ ಹರಿಯುತ್ತಿದೆ‌. ಮಳೆ ಮುಂದುವರಿದರೆ ಸಂಪರ್ಕ ತಪ್ಪುವ ಭೀತಿ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT