ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರ ಸ್ವಾಮಿಯ ಬೆಳ್ಳಿ ರಥಕ್ಕೆ ಮೈಸೂರಿನ ಕುಟುಂಬವೊಂದು 22.290 ಕೆಜಿ ತೂಕದ ಬೆಳ್ಳಿ ಕೊಳಗವನ್ನು (ಮುಖವಾಡ) ಅರ್ಪಿಸಿದೆ.
ಮೈಸೂರಿನ ಸತ್ಯಾನಂದ, ಅಶೋಕ ಮತ್ತು ಕುಟುಂಬಸ್ಥರು ಬೆಳ್ಳಿ ಕೊಳಗವನ್ನು ನೀಡಿದ್ದು, ಸೋಮವಾರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಹಾಗೂ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಮಹದೇಶ್ವರ ಸ್ವಾಮಿಗೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.