ADVERTISEMENT

ಬಿರುಸಿನ ವರ್ಷಧಾರೆ; ಕೆರೆಕಟ್ಟೆಗಳಿಗೆ, ಹರಿದ ನೀರು

ಶುಕ್ರವಾರ ರಾತ್ರಿ ಜಿಲ್ಲೆಯಲ್ಲಿ 2.8 ಸೆಂ.ಮೀ ಮಳೆ, ಚಾಮರಾಜನಗರದಲ್ಲಿ 3.7 ಸೆಂ.ಮೀ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 14:20 IST
Last Updated 10 ಅಕ್ಟೋಬರ್ 2020, 14:20 IST
ಚಾಮರಾಜನಗರದ ದೊಡ್ಡರಸನಕೊಳ ಅರ್ಧದಷ್ಟು ಭರ್ತಿಯಾಗಿರುವುದು
ಚಾಮರಾಜನಗರದ ದೊಡ್ಡರಸನಕೊಳ ಅರ್ಧದಷ್ಟು ಭರ್ತಿಯಾಗಿರುವುದು   

ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯೂ ಉತ್ತಮ ಮಳೆಯಾಗಿದ್ದು, ಕೆರೆ ಕಟ್ಟೆಗಳಿಗೆ ನೀರು ಹರಿದು ಬಂದಿದೆ.

ನಗರದ ಐತಿಹಾಸಿಕ ದೊಡ್ಡರಸನಕೊಳ ಅರ್ಧದಷ್ಟು ತುಂಬಿದೆ. ತಾಲ್ಲೂಕಿನ ಕೋಡಿಮೋಳೆ ಕೆರೆಗೂ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.

ಶುಕ್ರವಾರ ಬೆಳಿಗ್ಗೆ 8.30ರಿಂದ ಶನಿವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 2.8 ಸೆಂ.ಮೀ ಮಳೆಯಾಗಿದೆ.

ADVERTISEMENT

ಚಾಮರಾಜನಗರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 3.7 ಸೆಂ.ಮೀ ಮಳೆಯಾಗಿದೆ. ಹನೂರು ತಾಲ್ಲೂಕಿನಲ್ಲಿ 3.5 ಸೆಂ.ಮೀ ಮಳೆ ಸುರಿದಿದೆ. ಕೊಳ್ಳೇಗಾಲ 2.9, ಯಳಂದೂರು 1.8 ಮತ್ತು ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 0.8 ಸೆಂ.ಮೀ ಮಳೆಯಾಗಿದೆ.

ಹೋಬಳಿಗಳ ಪೈಕಿ ಚಾಮರಾಜನಗರ ಹೋಬಳಿಯಲ್ಲಿ 5.6 ಸೆಂ.ಮೀ ಮಳೆಯಾಗಿದೆ. ಹರವೆಯಲ್ಲಿ 4.9, ಹರದನಹಳ್ಳಿಯಲ್ಲಿ 4.7 ಸೆಂ.ಮೀ ಮಳೆ ಬಿದ್ದಿದೆ.

ತಗ್ಗು ಪ್ರದೇಶಗಳಲ್ಲಿ ನೀರು: ಶುಕ್ರವಾರ ಸಂಜೆಯಿಂದಲೇ ಸುರಿದ ಭಾರಿ ಮಳೆಯಿಂದಾಗಿ ಹೊಲ, ತೋಟಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿತ್ತು. ತಗ್ಗು ಪ್ರದೇಶಗಳೆಲ್ಲ ಕೆರೆಯಾಗಿ ಮಾರ್ಪಟ್ಟಿದ್ದವು.

ಶನಿವಾರವೂ ಮಳೆ: ಜಿಲ್ಲೆಯಾದ್ಯಂತ ಶನಿವಾರವೂ ಮೋಡದ ವಾತಾವರಣ ಮುಂದುವರಿದಿದ್ದು, ಸಂಜೆ ಹೊತ್ತಿಗೆ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಚಾಮರಾಜನಗರದಲ್ಲಿ ಸಂಜೆ ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.