ಮಹದೇಶ್ವರ ಬೆಟ್ಟ: ಇಲ್ಲಿನ ಸಾಲೂರು ಮಠದ ಹೊಸ ಉತ್ತರಾಧಿಕಾರಿಯಾಗಿ ಎಂ.ನಾಗೇಂದ್ರ ಅವರು ಶನಿವಾರ ಪಟ್ಟಕ್ಕೆ ಏರಿದರು.
ಮಠದ ಪೀಠಾಧಿಪತಿ ಪಟ್ಟದ ಗುರುಸ್ವಾಮಿ ಅವರು ಬ್ರಾಹ್ಮಿ ಮುಹೂರ್ತದಲ್ಲಿ ನಾಗೇಂದ್ರ ಅವರನ್ನು ಶಿಷ್ಯರಾಗಿ ಸ್ವೀಕರಿಸಿದರು.
ನೂತನವಾಗಿ ಪಟ್ಟಕ್ಕೇರಿರುವ ಸ್ವಾಮೀಜಿಗೆಶಾಂತಮಲ್ಲಿಕಾರ್ಜುನ ಸ್ವಾಮಿ ಎಂದು ಹೆಸರಿಡಲಾಗಿದೆ.
ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗಸ್ವಾಮೀಜಿ ಪಟ್ಟಧಿಕಾರ ಮಹೋತ್ಸವಕ್ಕೆ ಸಾಕ್ಷಿಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.