ಕೊಳ್ಳೇಗಾಲ: ಕೋವಿಡ್ನಿಂದ ಮೃತಪಟ್ಟ ತಾಯಿಯ ಶವಸಂಸ್ಕಾರ ಮಾಡಲು ಹೋದ ಮಗನೂ ಹೃದಯಾ ಘಾತದಿಂದ ಶನಿವಾರ ಮೃತಪಟ್ಟಿದ್ದಾರೆ.
ನಗರದ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯ ನಿವಾಸಿ ಸರೋಜಮ್ಮ (82) ಹಾಗೂ ಅವರ ಮಗ ಸುರೇಶ್ (60) ಮೃತಪಟ್ಟವರು.
ಶುಕ್ರವಾರ ಸರೋಜಮ್ಮ ಅವರಿಗೆ ಕೋವಿಡ್ ದೃಢಪಟ್ಟಿತ್ತು, ಮನೆಯಲ್ಲೇ ಅವರು ಐಸೋಲೇಷನ್ ಆಗಿದ್ದರು. ಶನಿವಾರ
ನಿಧನರಾದರು.
ಚಾಮರಾಜನಗರ ತಾಲ್ಲೂಕಿನ ಹುಳ್ಳಿನಂಜನಪುರ ಗ್ರಾಮದ ಜಮೀನಿನಲ್ಲಿ ಸರೋಜಮ್ಮ ಅವರ ಅಂತ್ಯಕ್ರಿಯೆ ಮಾಡುವಾಗ ಮಗ ಸುರೇಶ್ ಅವರು ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟರು.
ಸುರೇಶ್ ಶವವನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ನೆಗಿಟಿವ್ ವರದಿ ಬಂದಿದ್ದು, ಶವಸಂಸ್ಕಾರ ನಡೆಸಲಾಯಿತು.
ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅವರ ಅತ್ತೆ ಸೋರೋಜಮ್ಮ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.