ಗುಂಡ್ಲುಪೇಟೆ: ಹಿಮವದ್ ಗೋಪಾಲಸ್ವಾಮಿ ಬೆಟ್ಟದ ರಸ್ತೆ ಡಾಂಬರೀಕರಣ ಉದ್ದೇಶದಿಂದ ಮೂರು ದಿನ ನಿರ್ಬಂಧಿಸಲಾಗಿದ್ದ ವಾಹನ ಸಂಚಾರ ಡಿ.21ರಂದು ಬೆಳಿಗ್ಗೆ ಮತ್ತೆ ಆರಂಭಗೊಂಡಿದೆ.
ತೀವ್ರ ಹದಗೆಟ್ಟಿದ್ದ ಬೆಟ್ಟಕ್ಕೆ ತೆರಳುವ 11.20 ಕಿ.ಮೀ. ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಡಾಂಬರೀಕರಣ ಮಾಡಿ ದೆ. ಈ ಕಾರಣದಿಂದ ನಿರ್ಬಂಧಿಸಿದ್ದ ಬಸ್ ಸಂಚಾರ ಗುರುವಾರ ಪ್ರಾರಂಭವಾಗಿದೆ.
ನಿರ್ಬಂಧಿಸಿದ ದಿನಗಳಲ್ಲಿ ಬೆಟ್ಟದಲ್ಲಿ ಭಕ್ತರು, ಪ್ರವಾಸಿಗರ ಸಂಖ್ಯೆ ಬಹಳ ಕಡಿಮೆಯಿತ್ತು. ಕೇವಲ ಮೂರು ಬಸ್ಗಳನ್ನು ಮಾತ್ರ ಬಿಡಲಾಗಿತ್ತು ಎಂದು ಡಿಪೋ ವ್ಯವಸ್ಥಾಪಕರಾದ ಪುಷ್ಪಾ ಮಾಹಿತಿ ನೀಡಿದರು. ಅರಣ್ಯ ಇಲಾಖೆಯಿಂದಲೂ ಬೆಟ್ಟಕ್ಕೆ ಮೂರು ಜೀಪ್ಗಳು ಸಂಚಾರ ಮಾಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.