ADVERTISEMENT

ಗೌರಿಬಿದನೂರು: ಕೌಟುಂಬಿಕ ಕಲಹ ಹಿನ್ನೆಲೆ, ತಮ್ಮನಿಂದಲೇ ಅಣ್ಣನ ಬರ್ಬರ ಕೊಲೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 9:46 IST
Last Updated 10 ಜೂನ್ 2020, 9:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗೌರಿಬಿದನೂರು: ತಾಲ್ಲೂಕಿನ ಮೇಲಿನ ಕುರುಬರಹಳ್ಳಿಯಲ್ಲಿ ಕೌಟುಂಬಿಕ ಕಲಹದಿಂದ ಮಂಗಳವಾರ ರಾತ್ರಿ ತಮ್ಮ ಅಣ್ಣನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ರಮೇಶ್ (36) ಕೊಲೆಯಾದ ವ್ಯಕ್ತಿ, ಮನೆ ಪಾಯದ ವಿಚಾರದಲ್ಲಿ ಸೋದರರಿಬ್ಬರಿಗೂ ಮಂಗಳವಾರ ಗಲಾಟೆಯಾಗಿದ್ದು, ರಾತ್ರಿ ಇಬ್ಬರೂ ಮನೆಯಲ್ಲೆ ಮಲಗಿದ್ದಾರೆ. ಈ ಸಮಯವನ್ನು ಹೊಂಚು ಹಾಕಿ ತಮ್ಮ ಸುರೇಶ ಮಾರಕಾಸ್ತ್ರದಿಂದ ಅಣ್ಣ ರಮೇಶನ ಕತ್ತನ್ನು ಕೊಯ್ದು ಯಾರಿಗೂ ಅನುಮಾನ ಬರದಂತೆ ಮನೆಯಲ್ಲೆ ಮಲಗಿದ್ದಾನೆ.

ಬುಧವಾರ ಬೆಳಿಗ್ಗೆ ಅಣ್ಣ ಶವವಾಗಿದ್ದನು. ಸಂಬಂಧಿಕರು ಕೂಡಲೇ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ತಮ್ಮ ಸುರೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಣ್ಣ ರಮೇಶ್‌ನನ್ನು ಹತ್ಯೆ ಮಾಡಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ADVERTISEMENT

ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.