ADVERTISEMENT

ಮರ್ಯಾದೆಯಾಗಿ ಸುಧಾಕರ್‌ಗೆ ಮತ ನೀಡಿ: ಬ್ರಹ್ಮಾನಂದಂ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 15:36 IST
Last Updated 1 ಡಿಸೆಂಬರ್ 2019, 15:36 IST
ಬ್ರಹ್ಮಾನಂದಂ
ಬ್ರಹ್ಮಾನಂದಂ   

ಗೌರಿಬಿದನೂರು: ‘ಮರ್ಯಾದೆಯಾಗಿ ಸುಧಾಕರ್‌ಗೆ ಮತ ನೀಡಿ ಇಲ್ಲದಿದ್ದರೆ ಶಾಂತಿ ಕದಡುತ್ತದೆ’ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಚೇನಹಳ್ಳಿಯಲ್ಲಿ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ತೆಲುಗು ಹಾಸ್ಯನಟ ಬ್ರಹ್ಮಾನಂದಂ ಹೇಳಿದರು.

ತಾಲ್ಲೂಕಿನ ಹಳೇಹಳ್ಳಿ, ಪುರ, ಜರಬಂಡಹಳ್ಳಿಯಲ್ಲಿ ಅವರು ಸುಧಾಕರ್ ಪರ ಮತಯಾಚಿಸಿದರು.

‘ಸುಧಾಕರ್ ನನಗೆ ಒಳ್ಳೆಯ ಸ್ನೇಹಿತರು. ಅವರು ವಿದ್ಯಾವಂತ ಹಾಗೂ ಬುದ್ಧಿವಂತ ರಾಜಕಾರಣಿ. ನನ್ನ ಅಭಿಮಾನಿಗಳು ತಪ್ಪದೆ ಸುಧಾಕರ್ ಅವರಿಗೆ ಮತ ನೀಡಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.