ADVERTISEMENT

ನಾಯಿ ದಾಳಿಗೆ ಕೃಷ್ಣಮೃಗ ಬಲಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 3:43 IST
Last Updated 6 ಏಪ್ರಿಲ್ 2021, 3:43 IST
ನಾಯಿಗಳ ದಾಳಿಗೆ ತುತ್ತಾದ ಕೃಷ್ಣಮೃಗ
ನಾಯಿಗಳ ದಾಳಿಗೆ ತುತ್ತಾದ ಕೃಷ್ಣಮೃಗ   

ಶಿಡ್ಲಘಟ್ಟ: ತಾಲ್ಲೂಕಿನ ವೈ. ಹುಣಸೇನಹಳ್ಳಿಯಲ್ಲಿ ನಾಯಿಗಳ ದಾಳಿಗೆ ತುತ್ತಾಗಿದ್ದ ಕೃಷ್ಣಮೃಗವನ್ನು ಸೋಮವಾರ ಗ್ರಾಮಸ್ಥರು ರಕ್ಷಿಸಿ
ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿಸಿದರು. ಆದರೆ, ಅರಣ್ಯ ಇಲಾಖೆಯ ಸಿಬ್ಬಂದಿ ವೈದ್ಯಕೀಯ ಚಿಕಿತ್ಸೆ ಕೊಡಿಸಿದರಾದರೂ ಫಲಕಾರಿಯಾಗದೇ ಅದು ಮೃತಪಟ್ಟಿದೆ.

ಬೇಸಿಗೆಯ ಬೇಗೆ ತಡೆಯಲಾರದೆ ಕೃಷ್ಣಮೃಗ ಹಳ್ಳಿಯ ಬಳಿ ಬಂದಿರಬೇಕು. ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗಾಗಿ ನೀರು ಇಡುವ ವ್ಯವಸ್ಥೆಯಾಗಬೇಕು. ತ್ವರಿತವಾಗಿ ಕ್ರಮವಹಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಜಪ್ಪ ಒತ್ತಾಯಿಸಿದರು.

ಅರಣ್ಯ ಇಲಾಖೆಯ ರಮೇಶ್, ಗೋವಿಂದರಾಜ್, ಗ್ರಾಮ ಪಂಚಾಯಿತಿ ಸದಸ್ಯ ರಾಜಪ್ಪ, ರಂಜಿತ್, ಸುಮನ್ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.