ADVERTISEMENT

ಚಿಕ್ಕಬಳ್ಳಾಪುರ | 18 ಶಿಕ್ಷಕರಿಗೆ ಜಿಲ್ಲಾ ಅತ್ಯತ್ತಮ ಶಿಕ್ಷಕ ಪ್ರಶಸ್ತಿ

ಇಂದು ಕನ್ನಡ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 5:25 IST
Last Updated 5 ಸೆಪ್ಟೆಂಬರ್ 2025, 5:25 IST
ಲತಾ
ಲತಾ   

ಚಿಕ್ಕಬಳ್ಳಾಪುರ: ಜಿಲ್ಲೆಯ 18 ಶಿಕ್ಷಕರಿಗೆ 2025–26ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗಿದೆ. ಪ್ರಾಥಮಿಕ, ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಒಂದೊಂದು ವಿಭಾಗದಲ್ಲಿಯೂ ಆರು ಮಂದಿಗೆ ಪ್ರಶಸ್ತಿ ನೀಡಲಾಗಿದೆ.

ಶಿಕ್ಷಣ ಇಲಾಖೆ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ‘ಜಿಲ್ಲಾ ಮಟ್ಟದ ಆಯ್ಕೆ ಸಮಿತಿ’ ಸಭೆಯು ಬುಧವಾರ ನಡೆದಿತ್ತು. ಗುರುವಾರವೂ ಮತ್ತೆ ಸಮಿತಿ ಸದಸ್ಯರು ಸಭೆ ನಡೆಸಿದ್ದ ಈ ಆಯ್ಕೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ಶುಕ್ರವಾರ (ಸೆ.5) ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ADVERTISEMENT

ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಬಾಗೇಪಲ್ಲಿ ತಾಲ್ಲೂಕಿನ ಮರವಪಲ್ಲಿ ಶಾಲೆಯ ಮದ್ದಿರೆಡ್ಡಿ ವಿ., ಚಿಕ್ಕಬಳ್ಳಾಪುರ ತಾಲ್ಲೂಕು ನುಗುತಹಳ್ಳಿ ಶಾಲೆಯ ಶ್ರೀನಿವಾಸ ಎಂ.ವಿ., ಚಿಂತಾಮಣಿ ತಾಲ್ಲೂಕು ಟಿ.ವಡ್ಡಹಳ್ಳಿ ಶಾಲೆಯ ಟಿ.ಎನ್.ಶಮೀವುಲ್ಲಾ, ಗೌರಿಬಿದನೂರು ತಾಲ್ಲೂಕು ಪುಟ್ಟಾಪುರ್ಲಹಳ್ಳಿ ಶಾಲೆಯ ಅಶ್ವತ್ಥಪ್ಪ ಎಚ್., ಗುಡಿಬಂಡೆ ತಾಲ್ಲೂಕು ಉಪ್ಪಾರಹಳ್ಳಿ ಶಾಲೆಯ ಸಂತೋಷ್ ಕುಮಾರ್ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಅಮ್ಮೂರ ತಿಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನಾಗರತ್ನಮ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲೆ ವಿಭಾಗ: ಬಾಗೇಪಲ್ಲಿ ತಾಲ್ಲೂಕು ಆಚೇಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ವೆಂಕಟರೆಡ್ಡಿ ಕೆ.ಸಿ., ಚಿಕ್ಕಬಳ್ಳಾಪುರ ತಾಲ್ಲೂಕು ಕುಡುವತಿ ಶಾಲೆಯ ಎಸ್‌.ಆರ್.ಲತಾ, ಚಿಂತಾಮಣಿ ತಾಲ್ಲೂಕು ಸಿದ್ದೇಪಲ್ಲಿ ಶಾಲೆಯ ನಾಗರತ್ನಮ್ಮ ಎಂ., ಗೌರಿಬಿದನೂರು ತಾಲ್ಲೂಕಿನ ಕಲ್ಲಿನಾಯಕನಹಳ್ಳಿ ಶಾಲೆಯ ನರಸಮ್ಮ, ಗುಡಿಬಂಡೆ ತಾಲ್ಲೂಕು ಯಲಕಲರಾಳ್ಳಹಳ್ಳಿ ಶಾಲೆಯ ಜಿ.ಎನ್.ಶ್ರೀನಿವಾಸ್, ಶಿಡ್ಲಘಟ್ಟ ತಾಲ್ಲೂಕು ಸುಗುಟೂರು ಶಾಲೆಯ ತಾಜೂನ್ ಎಚ್. ಪ್ರಶಸ್ತಿ ಪಡೆದಿದ್ದಾರೆ.

ಪ್ರೌಢಶಾಲಾ ವಿಭಾಗ: ಬಾಗೇಪಲ್ಲಿ ತಾಲ್ಲೂಕಿನ ಘಂಟಂವಾರಿಪಲ್ಲಿ ಶಾಲೆಯ ರವಿ ಎಲ್., ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಶಾಲೆಯ ಸುಜಾತ ಜಿ.ಎಲ್., ಚಿಂತಾಮಣಿ ತಾಲ್ಲೂಕಿನ ಯಗವಕೋಟೆ ಶಾಲೆಯ ಶ್ರೀನಿವಾಸ ಎಂ., ಗೌರಿಬಿದನೂರು ತಾಲ್ಲೂಕಿನ ಬೈಚಾಪುರ ಶಾಲೆಯ ಸಿದ್ದಪ್ಪ ಟಿ., ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಶಾಲೆಯ ಲಕ್ಷ್ಮಿ ಕೆ.ಎಸ್., ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಸರ್ಕಾರಿ ಪ್ರೌಢಶಾಲೆಯ ಬೃಂದ ಕೆ. ಅವರು ಪ್ರೌಢಶಾಲಾ ವಿಭಾಗದಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಶ್ರೀನಿವಾಸ್
ಸುಜಾತ
ಬೃಂದ
ನಾಗರತ್ನಮ್ಮ
ತಾಜೂನ್
ರವಿ
ಮದ್ದಿರೆಡ್ಡಿ
ವೆಂಕಟರೆಡ್ಡಿ
ಸಿದ್ದಪ್ಪ
ನರಸಮ್ಮ
ಅಶ್ವತ್ಥಪ್ಪ
ನಾಗರತ್ನಮ್ಮ
ಶ್ರೀನಿವಾಸ್ ಎಂ.
ಶಮೀವುಲ್ಲಾ
ಸಂತೋಷ್
ಜಿ.ಎನ್.ಶ್ರೀನಿವಾಸ್
ಪ್ರೇಮಾವತಿ
ಲಕ್ಷ್ಮಿ
ಪ್ರೇಮಾವತಿಗೆ ರಾಜ್ಯ ಪ್ರಶಸ್ತಿ
ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಕ್ಲಸ್ಟರ್‌ನ ಈರೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಪ್ರೇಮಾವತಿ ಎನ್. ಅವರು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. 28 ವರ್ಷಗಳಿಂದ ಅವರು ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರೇಮಾವತಿ ಅವರು ಕೆಲಸ ನಿರ್ವಹಿಸಿದ ಶಾಲೆಗಳಲ್ಲಿ ಎಸ್‌ಡಿಎಂಸಿ ಸಮುದಾಯ ಸಹಶಿಕ್ಷಕರು ಸೇರಿದಂತೆ ಎಲ್ಲರ ಸಹಕಾರದಲ್ಲಿ  ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ವಿದ್ಯಾರ್ಥಿಗಳಿಗೆ ವಿವಿಧ ನಾವೀನ್ಯ ರೀತಿಯ ಬೋಧನಾ ತಂತ್ರಗಳನ್ನು ಹಾಗೂ ತಾಂತ್ರಿಕ ಉಪಕರಣಗಳನ್ನು ಬಳಸಿಕೊಂಡು ಕಲಿಸಿದ್ದಾರೆ. ಶಾಲೆಯ ಪರಿಸರ ಆಕರ್ಷಕಗೊಳಿಸಲು ಶ್ರಮಿಸಿದ್ದಾರೆ. ಹೀಗೆ ತಾವು ಕೆಲಸ ನಿರ್ವಹಿಸಿದ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಈ ಎಲ್ಲವನ್ನು ಪರಿಗಣಿಸಿ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.