ADVERTISEMENT

ಚಿಕ್ಕಬಳ್ಳಾಪುರ: ಆರಿದ್ರ ಮಳೆ ಆರ್ಭಟ, ರೈತರ ಮೊಗದಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 5:41 IST
Last Updated 30 ಜೂನ್ 2020, 5:41 IST
ಮಳೆ ನೀರಿನಿಂದ ಜೀವಕಳೆ ಪಡೆದ ಜಕ್ಕಲಮಡಗು ಜಲಾಶಯ
ಮಳೆ ನೀರಿನಿಂದ ಜೀವಕಳೆ ಪಡೆದ ಜಕ್ಕಲಮಡಗು ಜಲಾಶಯ   

ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ.

ಬೇಸಿಗೆಯಲ್ಲಿ ಬರಿದಾಗಿದ್ದ ಕೆರೆ, ಕುಂಟೆಗಳಲ್ಲಿ ಆರಿದ್ರ ಮಳೆಯ ಆರ್ಭಟಕ್ಕೆ ನೀರು ಕಾಣುವಂತಾಗಿದ್ದು, ರೈತಾಪಿ ವರ್ಗದ ಮೊಗದಲ್ಲಿ ಸಂತಸ ಮೂಡಿಸಿದೆ.

ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರಕ್ಕೆ ಕುಡಿಯುವ‌ ನೀರು ಪೂರೈಸುವ ಜಕ್ಕಲಮಡಗು ಜಲಾಶಯಕ್ಕೆ ಸೋಮವಾರ ರಾತ್ರಿ ಸುರಿದ ಮಳೆಯಿಂದ ಸುಮಾರು ನಾಲ್ಕು ಅಡಿ ನೀರು ಹರಿದು ಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.