ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಎಚ್.ಕ್ರಾಸ್ ಬಳಿ ಗುರುವಾರ ಹೊಸಕೋಟೆ ತಾಲ್ಲೂಕಿನ ತರಬಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ತ್ಯಾಗರಾಜ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳು ಕೆಲ ದಿನಗಳ ಹಿಂದೆ ಲಾಂಗ್ ಹಿಡಿದು ರಾಜಾರೋಷವಾಗಿ ‘ಟಿಕ್ಟಾಕ್’ ಆ್ಯಪ್ನಲ್ಲಿ ಚಿತ್ರೀಕರಿಸಿರುವ ವಿಡಿಯೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ತ್ಯಾಗರಾಜ್ ಅವರ ಮೇಲಿನ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳಾದ ಕುಂಬಿಗನಹಳ್ಳಿಯ ಸೋಮು ಅಲಿಯಾಸ್ ಸೋಮಶೇಖರ್, ಎಚ್.ಕ್ರಾಸ್ನ ಪಾಂಡು ಅಲಿಯಾಸ್ ಮಂಜು ಹಾಗೂ ನಂದಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕೆಲ ದಿನಗಳ ಹಿಂದೆ ಪಾಂಡು ಹಾಗೂ ನಂದಕುಮಾರ್ ಅವರು ತಮ್ಮ ಸ್ನೇಹಿತ ಮಂಜುನಾಥ್ ಎಂಬುವರ ಜತೆಗೂಡಿ ಟಗರು ಸಿನೆಮಾ ಸೇರಿದಂತೆ ವಿವಿಧ ಚಲನಚಿತ್ರಗಳ ಜನಪ್ರಿಯ ಸಂಭಾಷಣೆಗಳಿಗೆ ಲಾಂಗ್ ಹಿಡಿದು ಅಭಿನಯಿಸಿದ್ದ ‘ಟಿಕ್ಟಾಕ್’ ವಿಡಿಯೊಗಳು ಹಲ್ಲೆ ಘಟನೆ ಬೆನ್ನಲ್ಲೇ ವ್ಯಾಟ್ಸಪ್ ಮೂಲಕ ಹರಿದಾಡಿ, ಚರ್ಚೆಗೆ ಎಡೆ ಮಾಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.