ADVERTISEMENT

ಚಿಕ್ಕಬಳ್ಳಾಪುರ: ಮಹಾವೀರ ಜಯಂತಿ ಸಂಭ್ರಮ, ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 5:11 IST
Last Updated 15 ಏಪ್ರಿಲ್ 2022, 5:11 IST
ಮಹಾವೀರ ಜಯಂತಿ ಅಂಗವಾಗಿ ಚಿಕ್ಕಬಳ್ಳಾಪುರದಲ್ಲಿ ಜೈನ ಸಮಾಜದಿಂದ ಮೆರವಣಿಗೆ ನಡೆಯಿತು
ಮಹಾವೀರ ಜಯಂತಿ ಅಂಗವಾಗಿ ಚಿಕ್ಕಬಳ್ಳಾಪುರದಲ್ಲಿ ಜೈನ ಸಮಾಜದಿಂದ ಮೆರವಣಿಗೆ ನಡೆಯಿತು   

ಚಿಕ್ಕಬಳ್ಳಾಪುರ: ನಗರದಲ್ಲಿ ಜೈನ ಸಮಾಜದಿಂದ ಗುರುವಾರ ಮಹಾವೀರ ಜಯಂತಿ ಸಂಭ್ರಮದಿಂದ ನಡೆಯಿತು. ನಗರದ ಬಿ.ಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮಹಾವೀರರ ಮೂರ್ತಿಯ ಮೆರವಣಿಗೆ ಜರುಗಿತು.

ಇದಕ್ಕೂ ಮುನ್ನ ನಗರದ ಜೈನ ಮಂದಿರದಲ್ಲಿ ಮಹಾವೀರ ಜೈನ ಸಂಘ ಮತ್ತು ಮಹಾವೀರ ಜೈನ ಯುವಕರ ಮಂಡಳಿಯು ಹಮ್ಮಿಕೊಂಡಿದ್ದ ಮಹಾವೀರ ಜಯಂತಿಯನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಉದ್ಘಾಟಿಸಿದರು.

ಜೈನ ಸಮಾಜವು ಅಹಿಂಸೆಯನ್ನು ಪ್ರತಿಪಾದಿಸುತ್ತದೆ. ಮಹಾವೀರರು ಸಮಾಜಕ್ಕೆ ಉದಾತ್ತವಾದ ಸಂದೇಶಗಳನ್ನು ನೀಡಿದ್ದಾರೆ. ಆ ಸಂದೇಶಗಳ ಅಡಿಯನ್ನು ನಾವು ಮುನ್ನಡೆಯಬೇಕು ಎಂದರು.

ADVERTISEMENT

ಜೈನ ಸಮಾಜದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.