ಬಾಳೆಹೊನ್ನೂರು: ಬೆಂಗಳೂರಿನ ಆರ್.ವಿ. ಭದ್ರಯ್ಯ ಸ್ಟೋರ್ಸ್ನ ಆರ್.ಬಿ.ಬಸವರಾಜ್ ಮತ್ತು ಕುಟುಂಬದವರು 32 ಅಡಿ ಉದ್ದದ ಪಂಚಮುಖಿ ರುದ್ರಾಕ್ಷಿ ಮಾಲೆಯನ್ನು ಇಲ್ಲಿನ ರಂಭಾಪುರಿ ಪೀಠಕ್ಕೆ ಶುಕ್ರವಾರ ಅರ್ಪಿಸಿದರು.
ನಂತರ ಮಾತನಾಡಿದ ಆರ್.ಬಿ. ಬಸವರಾಜ್, ‘ಈ ಮಾಲೆ ನಿರ್ಮಾಣಕ್ಕೆ ನೇಪಾಳದಿಂದ ರುದ್ರಾಕ್ಷಿ ತರಿಸಲಾಗಿದೆ. 30 ಜನರ ತಂಡವು 15 ದಿನಗಳ ಕಾಲ ಶ್ರಮಿಸಿದ್ದು, 50,108 ಪಂಚಮುಖಿ ರುದ್ರಾಕ್ಷಿಗಳಿಂದ ಮಾಲೆ ಮಾಡಲಾಗಿದೆ. ಸುಮಾರು 300 ಕೆಜಿ ತೂಕ ಇದೆ. ರುದ್ರಾಕ್ಷಿಯನ್ನು ಪೋಣಿಸಲು 50 ಕೆ.ಜಿ ಹಿತ್ತಾಳೆ ತಂತಿ ಬಳಸಲಾಗಿದ್ದು, ನಡುವೆ 5 ಸಾವಿರ ಕ್ರಿಸ್ಟಲ್ ಬಾಲ್ ಅಳವಡಿಸಲಾಗಿದೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.