ಕಳಸ: ಇಲ್ಲಿನ ಕಳಸ ಸಹಕಾರಿ ಸಂಘದ ಸಭಾಂಗಣದಲ್ಲಿ ಬುಧವಾರ ಅಡಿಕೆ ಎಲೆಚುಕ್ಕೆ ರೋಗದ ನಿರ್ವಹಣೆ ಬಗ್ಗೆ ಮಾಹಿತಿ ಶಿಬಿರ ನಡೆಯಿತು.
ತೋಟಗಾರಿಕಾ ಇಲಾಖೆ ಆಯೋಜಿಸಿದ್ದ ಶಿಬಿರದಲ್ಲಿ ಮೂಡಿಗೆರೆ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಗಿರೀಶ್ ಎಲೆಚುಕ್ಕೆ ರೋಗದ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು. ರೋಗಪೀಡಿತ ಅಡಿಕೆ ಗರಿಗೆ ಔಷಧಿ ಸಿಂಪಡಿಸಬೇಕು. ಇಲ್ಲವೇ ಕತ್ತರಿಸಿ ನಾಶಪಡಿಸಬೇಕು ಎಂದು ತಿಳಿಸಿದರು.
ಮಣ್ಣಿನಲ್ಲಿ ರಸಸಾರ ನಿರ್ವಹಣೆ ಮಾಡಿದರೆ ಬಹಳಷ್ಟು ರೋಗಗಳ ಹತೋಟಿಗೆ ಬರುತ್ತವೆ. ಅದಕ್ಕೆ ಸಮಗ್ರ ಪೋಷಕಾಂಶ ನೀಡಬೇಕು ಎಂದರು.
ಬೆಳೆಗಾರ ಬಿ.ಎಲ್.ರಾಮದಾಸ್ ಮಾತನಾಡಿ, ಮಣ್ಣಿನ ಪರೀಕ್ಷೆ ಮಾಡದೆ ಯಾವುದೇ ರೋಗಕ್ಕೆ ಔಷಧ, ಗೊಬ್ಬರದ ಸಲಹೆ ನೀಡುವುದು ತಪ್ಪು ಎಂದರು.
ತೋಟಗಾರಿಕಾ ಇಲಾಖೆ ಉಪನಿರ್ದೇಶಕ ವೇದಮೂರ್ತಿ ಮಾತನಾಡಿ, ಮರಸಣಿಗೆ ಮತ್ತು ಸಂಸೆ ಪ್ರದೇಶದಲ್ಲಿ ಎರಡು ವರ್ಷಗಳ ಹಿಂದೆ ಕಂಡುಬಂದ ಎಲೆಚುಕ್ಕೆ ರೋಗವು ಫಂಗಸ್ನಿಂದ ಹರಡುತ್ತಿದೆ. ಇದನ್ನು ನಿಯಂತ್ರಿಸಲು ಸಾಧ್ಯವಿದೆ. ಆದರೆ ಎಲ್ಲ ಬೆಳೆಗಾರರು ಹತೋಟಿ ಕ್ರಮ ಪಾಲಿಸಬೇಕು ಎಂದರು.
ತೋಟಗಾರಿಕಾ ಸಹಾಯಕ ನಿರ್ದೇಶಕ ಜಯದೇವ್, ಸಹಕಾರ ಸಂಘದ ಆಶಾಲತಾ ಜೈನ್, ಸತೀಶ್ಚಂದ್ರ, ಸಿಇಒ ಮಹಾಲೇಶ್ವರ್, ಬೆಳೆಗಾರರಾದ ಶೇಷಗಿರಿ, ಜ್ವಾನಯ್ಯ, ಕೇಶವೇಗೌಡ, ಕೆ.ಸಿ.ಧರಣೇಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.