ADVERTISEMENT

ಉಪವಿಭಾಗಾಧಿಕಾರಿ ಡಾ.ನಾಗರಾಜ್‌ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 1:56 IST
Last Updated 2 ಆಗಸ್ಟ್ 2022, 1:56 IST
ಡಾ.ಎಚ್‌.ಎಲ್‌.ನಾಗರಾಜ್‌
ಡಾ.ಎಚ್‌.ಎಲ್‌.ನಾಗರಾಜ್‌   

ಚಿಕ್ಕಮಗಳೂರು: ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌. ನಾಗರಾಜ್‌ ಅವರನ್ನು ಮಂಡ್ಯ ಜಿಲ್ಲೆ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ವಿ.ಆರ್.ಶೈಲಜಾ ಅವರ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ನಾಗರಾಜ್‌ ಅವರನ್ನು ಕೆಲ ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಹೆಚ್ಚುವರಿ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಿ, ನಂತರ ಆದೇಶವನ್ನು ವಾಪಸ್‌ ಪಡೆಯಲಾಗಿತ್ತು.

ಪ್ರಕರಣಗಳ ಪೂರ್ಣ ವಿಲೇವಾರಿ ಸಾಧನೆ: ಡಾ.ನಾಗರಾಜ್‌ ಅವರು ಉಪ ವಿಭಾಗಾಧಿಕಾರಿ ಕೋರ್ಟ್‌ನಲ್ಲಿ ದಾಖಲಾಗಿದ್ದ ಎಲ್ಲ ಅರೆ ನ್ಯಾಯಿಕ ಪ್ರಕರಣಗಳನ್ನು(‘ಮ್ಯುಟೇಷನ್’, ‘ತಹಶೀಲ್ದಾರ್‌ ಆದೇಶ’, ‘ಬಗರ್‌ ಹುಕುಂ ಸಮಿತಿ ನಿರ್ಣಯ’, ಪಿಟಿಸಿಎಲ್‌ (ಪರಿಶಿಷ್ಟ ಜಾತಿ – ಪಂಗಡಗಳ ಭೂ ಪರಭಾರೆ ನಿಷೇಧ) ಕಾಯ್ದೆ...) ಪೂರ್ಣ ವಿಲೇವಾರಿ ಮಾಡಿ ರಾಜ್ಯದ ಗಮನ ಸೆಳೆದಿದ್ದರು.

ADVERTISEMENT

ಕೆರೆಗಳ ಸಂರಕ್ಷಣೆಗೆ ಒತ್ತು ನೀಡಿದ್ದರು. ಒತ್ತುವರಿ ತೆರವು, ಏರಿ ಹದ್ದುಬಸ್ತು ಮೊದಲಾದವನ್ನು ಕೈಗೊಂಡು ಹಲವು ಕೆರೆಗಳಿಗೆ ಕಾಯಕಲ್ಪ ಕಲ್ಪಿಸಿದ್ದರು.

ಖಾತೆ–ಪೋಡಿ ಅಭಿಯಾನ ನಡೆಸಿ ಬಹಳಷ್ಟು ಪ್ರಕರಣಗಳನ್ನು ಪರಿಹರಿಸಿದ್ದರು. ದಶಕಗಳಿಂದ ಬಾಕಿ ಇದ್ದ ಹಲವು ಪ್ರಕರಣಗಳಿಗೆ ಮುಕ್ತಿ ನೀಡಿದ್ದರು. ಶಾಲಾ ಜಾಗ ಖಾತಾ ಅಭಿಯಾನವನ್ನು ಈಚೆಗೆ ಆರಂಭಿಸಿ ಹೊಸ ಹೆಜ್ಜೆ ಇಟ್ಟಿದ್ದರು. ಆಡಳಿತದಲ್ಲಿ ಚುರುಕು ಮೂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.