ADVERTISEMENT

ಚಿಕ್ಕಮಗಳೂರು: ಸಿಗದಾಳು ಬಳಿ ಕಾರು ಪಲ್ಟಿ, ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 3:47 IST
Last Updated 18 ಜನವರಿ 2022, 3:47 IST
ಚಿಕ್ಕಮಗಳೂರು: ಸಿಗದಾಳು ಬಳಿ ಕಾರು ಪಲ್ಟಿ, ಇಬ್ಬರು ಸಾವು
ಚಿಕ್ಕಮಗಳೂರು: ಸಿಗದಾಳು ಬಳಿ ಕಾರು ಪಲ್ಟಿ, ಇಬ್ಬರು ಸಾವು   

ಚಿಕ್ಕಮಗಳೂರು: ಕೊಪ್ಪ ತಾಲ್ಲೂಕಿನ ಹರಿಹರಪುರ ಸಮೀಪದ ಸಿಗದಾಳು ಬಳಿ ಸೋಮವಾರ ತಡರಾತ್ರಿಕಾರು ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದಾರೆ.

ಕೊಪ್ಪದ ರಾಜಶೇಖರ್ (51), ಮಲ್ಲಂದೂರಿನ ಮಣಿಕಂಠ (37) ಮೃತಪಟ್ಟವರು. ಇಬ್ಬರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಲುವಾಗಿಲು ಕಡೆಯಿಂದ ಕೊಪ್ಪ ಕಡೆಗೆ ತೆರಳುವಾಗ ಅವಘಡ ಸಂಭವಿಸಿದೆ. ಸೇತುವೆ ಸನಿಹದಲ್ಲಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಏರಿ ಪಕ್ಕದ ತಗ್ಗು ಪ್ರದೇಶದ ಗದ್ದೆಗೆ ಉರುಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.