ಚಿಕ್ಕಮಗಳೂರು: ನಗರದ ಗೃಹಮಂಡಳಿ ಬಡಾವಣೆಯ ಜೀವಿತ್ (14), ಮುರಳಿ (14) ಹಾಗೂ ಚಿರಾಗ್ (15) ಬಿಳಿಕಲ್ಲು ಕೆರೆಯಲ್ಲಿ ಈಜುವಾಗನೀರು ಪಾಲಾಗಿದ್ದಾರೆ.
ಸೋಮವಾರ ಆಯುಧ ಪೂಜೆ ಮುಗಿಸಿಕೊಂಡು ಮೂವರು ಮನೆಯಿಂದ ತೆರಳಿದ್ದರು. ಸಂಜೆಯಾದರೂ ಮನೆಗೆ ವಾಪಸ್ ಬರದಿದ್ದಾಗಪೋಷಕರು ಮಹಿಳಾ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಕೆರೆ ಏರಿಯಲ್ಲಿ ಸೈಕಲ್ ಮತ್ತು ಬಟ್ಟೆಗಳು ಇದ್ದವು. ಕಾರ್ಯಾಚರಣೆಯಲ್ಲಿ ಮೂರೂ ಶವಗಳನ್ನು ಹೊರತೆಗೆಯಲಾಗಿದೆ ಎಂದು ಡಿವೈಎಸ್ಪಿ ಬಸಪ್ಪ ಅಂಗಡಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.