ADVERTISEMENT

ತುಂಗಾ: ನಾಲ್ವರು ನೀರುಪಾಲು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 20:14 IST
Last Updated 24 ಮಾರ್ಚ್ 2019, 20:14 IST

ಶೃಂಗೇರಿ: ಇಲ್ಲಿನ ವಿದ್ಯಾರಣ್ಯಪುರದ ಆಶ್ರಮದ ಬಳಿ ಭಾನುವಾರ ತುಂಗಾನದಿಗೆ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂದದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಶೃಂಗೇರಿಯ ಕಾಳಿಕಾಂಬ ಮೋಟರ್ಸ್ ಗ್ಯಾರೇಜ್‌ನ ಮಾಲೀಕ ರಾಮಚಂದ್ರ (35), ಅವರ ಸಂಬಂಧಿಕರಾದ ಕೊಪ್ಪ ತಾಲ್ಲೂಕಿನ ಬೆಳವಿನಕೂಡಿಗೆಯ ರತ್ನಾಕರ (38), ನಾಗೇಂದ್ರ (24), ಪ್ರದೀಪ(25) ಮೃತರು.

ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿದ ಪ್ರದೀಪನನ್ನು ರಕ್ಷಿಸಲು ಮುಂದಾದ ಇತರ ಮೂವರು ನೀರು ಪಾಲಾಗಿದ್ದಾರೆ.ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಮೃತದೇಹಗಳನ್ನು ನೀರಿನಿಂದ ಮೇಲೆತ್ತಿದರು. ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.