ADVERTISEMENT

ಬೀರೂರು: ಐಪಿಎಲ್ ಚಾಂಪಿಯನ್ ಗಣೇಶ ಮೂರ್ತಿ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 4:18 IST
Last Updated 1 ಸೆಪ್ಟೆಂಬರ್ 2025, 4:18 IST
ಬೀರೂರಿನ ಅಜ್ಜಂಪುರ ರಸ್ತೆ 3ನೇ ಕ್ರಾಸ್‌ನಲ್ಲಿ ಹಿಂದೂ ಪಡೆ ವತಿಯಿಂದ ಪ್ರತಿಷ್ಠಾಪಿಸಿದ್ದ ಐಪಿಎಲ್ ಚಾಂಪಿಯನ್ ಗಣೇಶನನ್ನು ಭಾನುವಾರ ಮೆರವಣಿಗೆ ನಡೆಸಿ ಸಮೀಪದ ದೇವನಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು
ಬೀರೂರಿನ ಅಜ್ಜಂಪುರ ರಸ್ತೆ 3ನೇ ಕ್ರಾಸ್‌ನಲ್ಲಿ ಹಿಂದೂ ಪಡೆ ವತಿಯಿಂದ ಪ್ರತಿಷ್ಠಾಪಿಸಿದ್ದ ಐಪಿಎಲ್ ಚಾಂಪಿಯನ್ ಗಣೇಶನನ್ನು ಭಾನುವಾರ ಮೆರವಣಿಗೆ ನಡೆಸಿ ಸಮೀಪದ ದೇವನಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು   

ಬೀರೂರು(ಕಡೂರು): ಬೀರೂರು ಪಟ್ಟಣದ ಅಜ್ಜಂಪುರ ರಸ್ತೆ 3ನೇ ಕ್ರಾಸ್‌ನಲ್ಲಿ ಹಿಂದೂ ಪಡೆ ವತಿಯಿಂದ ಪ್ರತಿಷ್ಠಾಪಿಸಿದ್ದ ಐಪಿಎಲ್ ಚಾಂಪಿಯನ್ ಗಣೇಶ ಮೂರ್ತಿಯನ್ನು ಭಾನುವಾರ ವಿಸರ್ಜನೆ ಮಾಡಲಾಯಿತು.

ಪ್ರತಿ ದಿನ ಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಯಿತು. ಸಂಜೆ ವೇಳೆ ಮಕ್ಕಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಾನುವಾರ ಅನ್ನಸಂತರ್ಪಣೆ ಏರ್ಪಡಿಸಿ ಪಟ್ಟಣದ ಗಣಪತಿ ತಯಾರಕ ಕುಂಬಾರಿ ಶಿವಕುಮಾರ್ ಅವರನ್ನು ಗೌರವಿಸಿದ ಬಳಿಕ ಪುಷ್ಪಗಳಿಂದ ಅಲಂಕರಿಸಿದ್ದ ವಾಹನದಲ್ಲಿ ಗಣೇಶನ ಮೂರ್ತಿಯನ್ನು ಸ್ಥಾಪಿಸಿ, ನಾಸಿಕ್‌ ಬ್ಯಾಂಡ್‌ ಹಾಗೂ ಮಂಗಳವಾದ್ಯಗಳೊಂದಿಗೆ ರಾಜಬೀದಿಯಲ್ಲಿ ಮೆರವಣಿಗೆ ನೆರವೇರಿಸಲಾಯಿತು.

ಮೆರವಣಿಗೆಯಲ್ಲಿ 5 ಎತ್ತುಗಳು ಭಾಗವಹಿಸಿದ್ದು ಉತ್ಸವಕ್ಕೆ ಮೆರಗು ನೀಡಿತು. ಸಮೀಪದ ದೇವನಕೆರೆಯಲ್ಲಿ ಗಣಪತಿ ಮೂರ್ತಿಯನ್ನು ಶಾಸ್ತ್ರೋಕ್ತವಾಗಿ ವಿಸರ್ಜಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಮನೆಗಳಲ್ಲಿ ಮತ್ತು ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಗಳನ್ನು ಮೆರವಣಿಗೆ ಮೂಲಕ ಕೊಂಡೊಯ್ದು ವಿಸರ್ಜನೆ ಮಾಡಲಾಯಿತು.

ADVERTISEMENT

ವಿಸರ್ಜನಾ ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಕುದುರೆ ಮಲ್ಲಿಕಾರ್ಜುನ್, ಉದಯ್, ಪ್ರಕಾಶ್, ವರುಣ್, ರವಿ, ಸಾತ್ವಿಕ, ತೇಜಸ್, ಅಜಯ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.