ADVERTISEMENT

ಭಾರಿ ಮಳೆ : ಧರೆಗುರುಳಿದ ಮರ

​ಪ್ರಜಾವಾಣಿ ವಾರ್ತೆ
Published 23 ಮೇ 2023, 15:20 IST
Last Updated 23 ಮೇ 2023, 15:20 IST
ಕರಕುಚ್ಚಿ ಗ್ರಾಮದಲ್ಲಿ ನೆಲಕ್ಕೆ ಉರುಳಿದ  ಮರಗಳು
ಕರಕುಚ್ಚಿ ಗ್ರಾಮದಲ್ಲಿ ನೆಲಕ್ಕೆ ಉರುಳಿದ  ಮರಗಳು   

ತರೀಕೆರೆ: ತಾಲ್ಲೂಕಿನ ದುಗ್ಲಾಪುರ, ಭಾವಿಕೆರೆ, ಸೀತಾಪುರ ಕಾವಲಿನಲ್ಲಿ ಮಂಗಳವಾರ ಭಾರಿ ಮಳೆ ಸುರಿಯಿತು.

ಮಳೆಯಿಂದ ಅಡಿಕೆ, ತೆಂಗು, ಭತ್ತದ ಬೆಳೆಗಳಿಗೆ ಅನುಕೂಲವಾಗಿದೆ. ತಾಲ್ಲೂಕಿನ ಕರಕುಚ್ಚಿ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಮಳೆ–ಗಾಳಿಗೆ ಅಡಿಕೆ, ತೆಂಗು, ಬಾಳೆ ಬೆಳೆಗಳು ನೆಲಕ್ಕೆ ಉರುಳಿವೆ. ಗುಡುಗು ಸಿಡಿಲಿಂದ ಆರಂಭವಾದ ಮಳೆಯ ಜೊತೆಗೆ ಜೋರಾದ ಗಾಳಿ ಬೀಸಿದ್ದರಿಂದ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿವೆ. ಗ್ರಾಮದ ಮೋಹನ್ ಕುಮಾರ ಅವರ ತೋಟದಲ್ಲಿ ನೂರಾರು ಅಡಿಕೆ ಮರಗಳು ನೆಲಕ್ಕೆ ಉರುಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT