ADVERTISEMENT

ಹೊರನಾಡು: ಮರ ಬಿದ್ದು ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 3:07 IST
Last Updated 11 ಜುಲೈ 2022, 3:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಳಸ: ತಾಲ್ಲೂಕಿನ ಹೊರನಾಡಿನ ಕಾಫಿತೋಟವೊಂದರಲ್ಲಿ ಭಾನುವಾರ ಮಧ್ಯಾಹ್ನ ಮರ ಬಿದ್ದು ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಪ್ರಿಯಾಂಕ (20) ಮೃತಪಟ್ಟ ಯುವತಿ.

ಜಿ.ರಾಮನಾರಾಯಣ ಜೋಷಿ ಮಾಲೀಕತ್ವದ ಹೂವಿನಹಿತ್ತಲು ಎಸ್ಟೇಟ್‍ನಲ್ಲಿ ಘಟನೆ ನಡೆದಿದೆ. ದೊಡ್ಡ ಮರವೊಂದು ಬೀಳುವ ಸದ್ದು ಕೇಳಿ ಕಾರ್ಮಿಕರು ಕಕ್ಕಾಬಿಕ್ಕಿಯಾದರು. ಮೈಮೇಲೆ ಮರ ಬಿದ್ದಾಗ ಯುವತಿ ಸ್ಥಳದಲ್ಲೇ ಮೃತಪಟ್ಟರು.

ADVERTISEMENT

ಹರಪನಹಳ್ಳಿ ಲಂಬಾಣಿ ತಾಂಡಾದ ನಿವಾಸಿಯಾಗಿದ್ದ ಪ್ರಿಯಾಂಕ ಮೇ ತಿಂಗಳಿಂದ ಚಿಕ್ಕಪ್ಪ, ಚಿಕ್ಕಮ್ಮನ ಜೊತೆ ಹೊರನಾಡಿನಲ್ಲೇ ವಾಸವಿದ್ದು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಕಳಸ ತಹಶೀಲ್ದಾರ್ ನಂದಕುಮಾರ್, ಠಾಣಾಧಿಕಾರಿ ಹರ್ಷವರ್ಧನ್, ಎಎಸ್‍ಐ ಮೋಹನ್ ಕುಮಾರ್ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.