ಕಳಸ: ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯುವ ರಾಮಮಂದಿರ ನಿರ್ಮಾಣದ ಭೂಮಿಪೂಜೆಯಲ್ಲಿ ಬಳಸಲು ಪುಣ್ಯ ಕ್ಷೇತ್ರಗಳಾದ ಕಳಸ ಮತ್ತು ಹೊರನಾಡಿನ ಮಣ್ಣನ್ನು ಕಳುಹಿಸಲಾಯಿತು.
ಹೊರನಾಡಿನ ಅನ್ನಪೂರ್ಣೇಶ್ವರಿಯ ಮಹಾಮಂಗಳಾರತಿ ಸಂದರ್ಭದಲ್ಲಿ ಆ ಗ್ರಾಮದ ಮಣ್ಣನ್ನು ಇರಿಸಿ ವಿಶೇಷ ಪ್ರಾರ್ಥನೆ ನೆರವೇರಿಸಲಾಗಿತ್ತು. ಆ ನಂತರ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಪ್ರಭು ಅವರು ಹೊರನಾಡಿನ ಜಿ.ಭೀಮೇಶ್ವರ ಜೋಷಿ ಅವರಿಂದ ಮಣ್ಣನ್ನು ಸ್ವೀಕರಿಸಿದರು.
ರಾಜಲಕ್ಷ್ಮಿ ಜೋಷಿ, ರಮೇಶ್ ಗೊರಸುಕುಡಿಗೆ, ಪ್ರಕಾಶ್ ಕಾರಗದ್ದೆ, ಬಜರಂಗ ದಳದ ಅಜಿತ್, ಚೇತನ್, ಸುದೀಪ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.